<p><strong>ಸಾಸ್ವೆಹಳ್ಳಿ</strong>: ಸಮೀಪದ ಕಮ್ಮಾರಗಟ್ಟೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ‘ಜಾನಪದ ಜಾತ್ರೆ’ಯ ಸಂಭ್ರಮ ನಡೆಯಿತು. ವಿದ್ಯಾರ್ಥಿಗಳ ಪೋಷಕರಿಗಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವು ಜನಾಕರ್ಷಣೀಯವಾಗಿತ್ತು. </p>.<p>ಹಳ್ಳಿ ಸೊಗಡಿನ ಪರಿಕರಗಳು, ಎತ್ತಿನ ಗಾಲಿ, ಮಣ್ಣಿನ ಮಡಕೆ ಹಾಗೂ ತಳಿರು- ತೋರಣಗಳಿಂದ ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. </p>.<p>ಬೆಳಿಗ್ಗೆ ಗ್ರಾಮದ ರಾಮಾಂಜನೇಯ ಮಂದಿರದಲ್ಲಿ ಗೋ-ಪೂಜೆ ನೆರವೇರಿಸಿದ ಮಹಿಳೆಯರು, ಪೂರ್ಣಕುಂಭ ಮೇಳದೊಂದಿಗೆ ಅತಿಥಿಗಳನ್ನು ಎತ್ತಿನ ಗಾಡಿಯ ಮೆರವಣಿಗೆಯಲ್ಲಿ ಶಾಲೆಗೆ ಬರಮಾಡಿಕೊಂಡರು. ಶಾಲೆಯ ಆವರಣದಲ್ಲಿ ಪೋಷಕರಿಗೆ ಗ್ರಾಮೀಣ ಆಟಗಳನ್ನು ಆಯೋಜಿಸಲಾಗಿತ್ತು. </p>.<p>ಶಾಲೆಯ ಮುಖ್ಯೋಪಾಧ್ಯಾಯ ಬಿ.ಸೋಮಶೇಖರ್ ಮಾತನಾಡಿ, ಗ್ರಾಮೀಣ ಕ್ರೀಡೆಗಳ ಮಹತ್ವ ಸಾರುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿತ್ತು. </p>.<p>ಬಿಇಒ ಕೆ.ಟಿ.ನಿಂಗಪ್ಪ, ಬಿಆರ್ಸಿ ಎಂ.ತಿಪ್ಪೇಶಪ್ಪ, ಟಿಪಿಇಒ ಜಗದೀಶ್, ಇಸಿಒಗಳಾದ ಮುದ್ದನ ಗೌಡ, ಹನುಮಂತ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಬಿ.ಹನುಮೇಶ್ ಮತ್ತು ಸದಸ್ಯರು, ಗ್ರಾಮದ ಮುಖಂಡರಾದ ಸಿದ್ದಪ್ಪ, ಹನುಮಂತಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸ್ವೆಹಳ್ಳಿ</strong>: ಸಮೀಪದ ಕಮ್ಮಾರಗಟ್ಟೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ‘ಜಾನಪದ ಜಾತ್ರೆ’ಯ ಸಂಭ್ರಮ ನಡೆಯಿತು. ವಿದ್ಯಾರ್ಥಿಗಳ ಪೋಷಕರಿಗಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವು ಜನಾಕರ್ಷಣೀಯವಾಗಿತ್ತು. </p>.<p>ಹಳ್ಳಿ ಸೊಗಡಿನ ಪರಿಕರಗಳು, ಎತ್ತಿನ ಗಾಲಿ, ಮಣ್ಣಿನ ಮಡಕೆ ಹಾಗೂ ತಳಿರು- ತೋರಣಗಳಿಂದ ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. </p>.<p>ಬೆಳಿಗ್ಗೆ ಗ್ರಾಮದ ರಾಮಾಂಜನೇಯ ಮಂದಿರದಲ್ಲಿ ಗೋ-ಪೂಜೆ ನೆರವೇರಿಸಿದ ಮಹಿಳೆಯರು, ಪೂರ್ಣಕುಂಭ ಮೇಳದೊಂದಿಗೆ ಅತಿಥಿಗಳನ್ನು ಎತ್ತಿನ ಗಾಡಿಯ ಮೆರವಣಿಗೆಯಲ್ಲಿ ಶಾಲೆಗೆ ಬರಮಾಡಿಕೊಂಡರು. ಶಾಲೆಯ ಆವರಣದಲ್ಲಿ ಪೋಷಕರಿಗೆ ಗ್ರಾಮೀಣ ಆಟಗಳನ್ನು ಆಯೋಜಿಸಲಾಗಿತ್ತು. </p>.<p>ಶಾಲೆಯ ಮುಖ್ಯೋಪಾಧ್ಯಾಯ ಬಿ.ಸೋಮಶೇಖರ್ ಮಾತನಾಡಿ, ಗ್ರಾಮೀಣ ಕ್ರೀಡೆಗಳ ಮಹತ್ವ ಸಾರುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿತ್ತು. </p>.<p>ಬಿಇಒ ಕೆ.ಟಿ.ನಿಂಗಪ್ಪ, ಬಿಆರ್ಸಿ ಎಂ.ತಿಪ್ಪೇಶಪ್ಪ, ಟಿಪಿಇಒ ಜಗದೀಶ್, ಇಸಿಒಗಳಾದ ಮುದ್ದನ ಗೌಡ, ಹನುಮಂತ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಬಿ.ಹನುಮೇಶ್ ಮತ್ತು ಸದಸ್ಯರು, ಗ್ರಾಮದ ಮುಖಂಡರಾದ ಸಿದ್ದಪ್ಪ, ಹನುಮಂತಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>