ರೇಣುಕಾಚಾರ್ಯ ಅವರು ಗ್ರಾಮೀಣ ಪ್ರದೇಶಗಳಿಗೆ ಬಸ್ ಸೇವೆಗೆ ಚಾಲನೆ ನೀಡಿದ ಬಳಿಕ ಚಾಲಕನ ಸಮವಸ್ತ್ರ ಹಾಕಿಕೊಂಡು, ಹೊನ್ನಾಳಿ ಖಾಸಗಿ ಬಸ್ನಿಲ್ದಾಣದಿಂದ ಬಸ್ ಚಲಾಯಿಸಿಕೊಂಡು ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನೀಪುರ, ಉಜ್ಜನೀಪುರ ತಾಂಡ, ಹೊಟ್ಯಾಪುರ, ಬೀರಗೊಂಡನಹಳ್ಳಿ, ರಾಂಪುರ, ಸಾಸ್ವೆಹಳ್ಳಿ ಗ್ರಾಮಗಳಿಗೆ ತೆರಳಿ ಪುನಃ ಇದೇ ಗ್ರಾಮಗಳ ಮೂಲಕ ಹೊನ್ನಾಳಿಗೆ ಮರಳಿ ಬಂದಿದ್ದರು. ಸುಮಾರು 60 ಕಿ.ಮೀ ಬಸ್ ಚಲಾಯಿಸಿಕೊಂಡು ಹೋಗಿದ್ದರು.