ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಖರೀದಿಗೆ ಆಗ್ರಹಿಸಿ ರೈತರಿಂದ ಅನಿರ್ದಿಷ್ಟಾವಧಿ ಧರಣಿ

Last Updated 10 ಫೆಬ್ರುವರಿ 2018, 8:32 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಇಲ್ಲಿನ ಎಪಿಎಂಸಿ ಆವರಣದಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಗಿತವಾಗಿರುವುದು ಸೇರಿದಂತೆ ಖರೀದಿ ಕೇಂದ್ರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಶುಕ್ರವಾರ ರೈತ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಧರಣಿ ಕುಳಿತರು.
ಮುಖಂಡ ಸಂಗನಗೌಡ ಚಿಕ್ಕೊಂಡ, ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿ, ‘ಬೆಂಬಲ ಬೆಲೆ ತೊಗರಿ ಖರೀದಿಯನ್ನು ಸ್ಥಗಿತಗೊಳಿಸಿರುವುರಿಂದ ರೈತರಿಗೆ ಅನ್ಯಾಯವಾಗಿದೆ. ಸಾಕಷ್ಟು ಸಂಖ್ಯೆಯ ರೈತರು ತೊಗರಿ ಖರೀದಿಗಾಗಿ ಹೆಸರು ನೋಂದಾಯಿಸಿದ್ದಾರೆ. ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿದರೆ ಒಂದಷ್ಟು ಲಾಭವಾಗುತ್ತದೆ ಎಂಬ ಆಶಾಭಾವನೆಯಲ್ಲಿದ್ದ ರೈತರಿಗೆ ಇದರಿಂದ ನಿರಾಸೆಯಾಗಿದೆ’ ಎಂದು ಹೇಳಿದರು.

‘ಸರ್ಕಾರ ರೈತರು ಎದುರಿಸುತ್ತಿರುವ ಕಷ್ಟವನ್ನು ಅರಿತುಕೊಂಡು ಶೀಘ್ರ ತೊಗರಿ ಖರೀದಿ ಪುನರ್‌ ಆರಂಭಿಸಬೇಕು. ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರೆಯುತ್ತದೆ’ ಎಂದರು.

ಧರಣಿಯಲ್ಲಿ ಬಸಪ್ಪ ಚೌಧರಿ, ಮಹಾಂತೇಶ ಬೆಲ್ಲದ, ಈರಪ್ಪ ಪಾಂಡು, ಈರನಗೌಡ ಪಾಟೀಲ, ಪರಸು ಗಬ್ಬೂರ, ಉಮಲು ಈಸೂರ, ಸಂಗಪ್ಪ ಚೌರಿ, ಭೂತಾಳಿ ಡೋಣೂರ, ರವಿ ಬೆಲ್ಲದ, ಆರ್‌.ಎಚ್‌.ಮಠಪತಿ, ಸಂಜೀವ ಪವಾರ, ಸಾಬಣ್ಣ ಕುಂಬಾರ, ಮಾರುತಿ ನಿಕ್ಕಂ, ಮಹಾಂತೇಶ ಪೂಜಾರಿ, ಮುದಕಪ್ಪ ಕುಳಗೇರಿ, ವೀರೇಶ ಹಿರೇಮಠ, ರಾಮಣ್ಣ ನಾಯ್ಕೋಡಿ, ಮಲ್ಲು ಅವಟಿ, ಪ್ರವೀಣ ಪವಾರ, ಪಾವಡೆಪ್ಪ ನಾಯ್ಕೋಡಿ, ನಿಂಗು ಕುಳಗೇರಿ, ಯಾಸೀನ ಹವಾಲ್ದಾರ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT