ಪ್ರತ್ಯಕ್ಷದರ್ಶಿ ಭೈರನಹಳ್ಳಿ ಗ್ರಾಮದ ಮಂಜಪ್ಪ ಹೇಳುವಂತೆ, ‘ನಮ್ಮದು ಕಾಡಂಚಿನ ಗ್ರಾಮವಾಗಿದ್ದು, ಜನರು ಕೆಲಸಗಳಿಗೆ ಹೋದಾಗ ನರಿ, ಕರಡಿ, ತೋಳ, ಕಾಡಂದಿ, ಕತ್ತೆ ಕಿರುಬಗಳು ಕಾಣಿಸಿಕೊಳ್ಳುತ್ತವೆ. ಕಳೆದ ವರ್ಷದಿಂದ ಚಿರತೆ ಈ ಭಾಗದಲ್ಲಿ ಕಾಣಿಸಿಕೊಂಡು ಕುರಿ, ಮೇಕೆ, ಸಾಕು ಪ್ರಾಣಿಗಳನ್ನು ತಿನ್ನುತ್ತಿವೆ. ಈ ಚಿರತೆಗೆ ಮರಿಗಳಿವೆ. ಈ ಹೆಣ್ಣು ಚಿರತೆಯೊಂದಿಗೆ ಇನ್ನೆರಡು ಚಿರತೆಗಳು ಇವೆ’ ಎನ್ನುತ್ತಾರೆ.