ನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವಸಂದೇಶ ಧ್ವಜಾರೋಹಣ ನೆರವೇರಿಸಿದ ನಂತರ ಜ್ಯೋತಿರ್ಲಿಂಗ ದರ್ಶನ ಶೋಭಾಯಾತ್ರೆ ನಡೆಯಿತು. ಹೊಸ ಭರಂಪುರದಲ್ಲಿರುವ 108 ಲಿಂಗೇಶ್ವರ, ನೀರು ಸರಬರಾಜು ಕೇಂದ್ರ ಸಮೀಪದ ಜೋಡು ಬಸವೇಶ್ವರ, ಹೊಸ ಹರ್ಲಾಪುರದ ಬಸವೇಶ್ವರ, ಕೈಲಾಸ ನಗರದ ಸಂಗಮೇಶ್ವರ, ದೇವಾಲಯಗಳಲ್ಲಿ ಅಭಿಷೇಕ, ರುದ್ರಾಭಿಷೇಕ ಮಾಡಿ ನಂತರ ವಿವಿಧ ಪುಷ್ಪ, ಬಿಲ್ವಪತ್ರೆಗಳಿಂದ ಅಲಂಕರಿಸುವ ಮೂಲಕ ಶಿವರಾತ್ರಿ ಆಚರಣೆಗೆ ಚಾಲನೆ ನೀಡಲಾಯಿತು.