<p><strong>ಮಲೇಬೆನ್ನೂರು</strong>: ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ– 25ರಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನು ಶಾಸಕ ಬಿ.ಪಿ. ಹರೀಶ್ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಇದೇ ವೇಳೆ ಪಟ್ಟಣದಲ್ಲಿ ₹ 63 ಕೋಟಿ ವೆಚ್ಚದ ಅಮೃತ್ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ರಸ್ತೆ ಅಗೆಯಲು ಅನುಮತಿಗಾಗಿ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿ 5 ತಿಂಗಳು ಕಳೆದರೂ ಅನುಮತಿ ನೀಡಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತು.</p>.<p>‘ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಉಂಟಾಗಿರುವುದು ಗೊತ್ತಾಯಿತು. ಇದು ರಸ್ತೆ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಲಿದೆ’ ಎಂದು ಪುರಸಭೆ ಸದಸ್ಯ ಸಿದ್ದೇಶ್, ಕೆ.ಜಿ. ಲೋಕೇಶ್, ಮುಖಂಡರಾದ ಜಿಗಳಿ ಹನುಮಗೌಡ, ಮಂಜಣ್ಣ, ಕುಮಾರ್ ಹಾಗೂ ನಾಗರಿಕರು ಆತಂಕ ವ್ಯಕ್ತಪಡಿಸಿದರು.</p>.<p>ತಕ್ಷಣ ಶಾಸಕರು ಲೋಕೋಪಯೋಗಿ ಇಲಾಖೆ ಎಇಇಗೆ ಕರೆ ಮಾಡಿ ತುರ್ತಾಗಿ ಅನುಮತಿ ನೀಡಲು ಸೂಚಿಸಿದರು. ಸ್ವಲ್ಪ ಸಮಯದ ನಂತರ ಪೈಪ್ ಅಳವಡಿಕೆ ಕೆಲಸ ಕೂಡ ಆರಂಭವಾಗಿದ್ದು ವಿಶೇಷ.</p>.<p>‘₹ 3 ಕೋಟಿ ವೆಚ್ಚದಲ್ಲಿ 11 ಮೀ. ಅಗಲದ ರಸ್ತೆ ಡಾಂಬರೀಕರಣ, ಹಾಳಾದ ಭಾಗದಲ್ಲಿ ಚರಂಡಿ, 26 ವಿದ್ಯುತ್ ಕಂಬದೊಂದಿಗೆ ದೀಪ ಅಳವಡಿಸುವುದು, ವಾಹನ ನಿಲುಗಡೆ, ಪಾದಚಾರಿ ರಸ್ತೆ ಹಾಗೂ 6 ಕಡೆ ರಸ್ತೆ ಉಬ್ಬು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣದ ನಂತರ ಅಗೆಯಲು ಅವಕಾಶ ಇಲ್ಲ’ ಎಂದು ಎಂಜಿನಿಯರ್ ಚೇತನ್ ನಕಾಶೆಯೊಂದಿಗೆ ಸವಿವರ ಮಾಹಿತಿ ನೀಡಿದರು.</p>.<p>‘ರಸ್ತೆ ಸಂಪೂರ್ಣ ಹಾಳಾಗಿದೆ. ನಾಗರಿಕರು, ವಾಹನ ಸವಾರರು ತೊಂದರೆ ಅನುಭವಿಸಿ ಬೇಸತ್ತಿದ್ದಾರೆ. ನಿರ್ಮಾಣ ಕಾರ್ಯ ತ್ವರಿತವಾಗಿ ಮಾಡಿ ಮುಗಿಸಿ’ ಎಂದು ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳಾದ ಗುರುಪಾದ ಸ್ವಾಮಿ, ನಿರಂಜನ್ ಗುತ್ತಿಗೆದಾರ ಶಿವಾ ರೆಡ್ಡಿ, ನಾಗರಿಕರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ– 25ರಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನು ಶಾಸಕ ಬಿ.ಪಿ. ಹರೀಶ್ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಇದೇ ವೇಳೆ ಪಟ್ಟಣದಲ್ಲಿ ₹ 63 ಕೋಟಿ ವೆಚ್ಚದ ಅಮೃತ್ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ರಸ್ತೆ ಅಗೆಯಲು ಅನುಮತಿಗಾಗಿ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿ 5 ತಿಂಗಳು ಕಳೆದರೂ ಅನುಮತಿ ನೀಡಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತು.</p>.<p>‘ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಉಂಟಾಗಿರುವುದು ಗೊತ್ತಾಯಿತು. ಇದು ರಸ್ತೆ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಲಿದೆ’ ಎಂದು ಪುರಸಭೆ ಸದಸ್ಯ ಸಿದ್ದೇಶ್, ಕೆ.ಜಿ. ಲೋಕೇಶ್, ಮುಖಂಡರಾದ ಜಿಗಳಿ ಹನುಮಗೌಡ, ಮಂಜಣ್ಣ, ಕುಮಾರ್ ಹಾಗೂ ನಾಗರಿಕರು ಆತಂಕ ವ್ಯಕ್ತಪಡಿಸಿದರು.</p>.<p>ತಕ್ಷಣ ಶಾಸಕರು ಲೋಕೋಪಯೋಗಿ ಇಲಾಖೆ ಎಇಇಗೆ ಕರೆ ಮಾಡಿ ತುರ್ತಾಗಿ ಅನುಮತಿ ನೀಡಲು ಸೂಚಿಸಿದರು. ಸ್ವಲ್ಪ ಸಮಯದ ನಂತರ ಪೈಪ್ ಅಳವಡಿಕೆ ಕೆಲಸ ಕೂಡ ಆರಂಭವಾಗಿದ್ದು ವಿಶೇಷ.</p>.<p>‘₹ 3 ಕೋಟಿ ವೆಚ್ಚದಲ್ಲಿ 11 ಮೀ. ಅಗಲದ ರಸ್ತೆ ಡಾಂಬರೀಕರಣ, ಹಾಳಾದ ಭಾಗದಲ್ಲಿ ಚರಂಡಿ, 26 ವಿದ್ಯುತ್ ಕಂಬದೊಂದಿಗೆ ದೀಪ ಅಳವಡಿಸುವುದು, ವಾಹನ ನಿಲುಗಡೆ, ಪಾದಚಾರಿ ರಸ್ತೆ ಹಾಗೂ 6 ಕಡೆ ರಸ್ತೆ ಉಬ್ಬು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣದ ನಂತರ ಅಗೆಯಲು ಅವಕಾಶ ಇಲ್ಲ’ ಎಂದು ಎಂಜಿನಿಯರ್ ಚೇತನ್ ನಕಾಶೆಯೊಂದಿಗೆ ಸವಿವರ ಮಾಹಿತಿ ನೀಡಿದರು.</p>.<p>‘ರಸ್ತೆ ಸಂಪೂರ್ಣ ಹಾಳಾಗಿದೆ. ನಾಗರಿಕರು, ವಾಹನ ಸವಾರರು ತೊಂದರೆ ಅನುಭವಿಸಿ ಬೇಸತ್ತಿದ್ದಾರೆ. ನಿರ್ಮಾಣ ಕಾರ್ಯ ತ್ವರಿತವಾಗಿ ಮಾಡಿ ಮುಗಿಸಿ’ ಎಂದು ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳಾದ ಗುರುಪಾದ ಸ್ವಾಮಿ, ನಿರಂಜನ್ ಗುತ್ತಿಗೆದಾರ ಶಿವಾ ರೆಡ್ಡಿ, ನಾಗರಿಕರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>