‘ಅನಸ್ತೇಸಿಯ, ಪಲ್ಮನರಿ ತಜ್ಞರ ಕೊರತೆ ಇತ್ತು. ಸಿಜಿ ಆಸ್ಪತ್ರೆಗೇ 30 ತಜ್ಞರು ಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೆವು. ಸರ್ಕಾರವು ಸಿಜಿ ಆಸ್ಪತ್ರೆಗೆ ಮೂವರನ್ನು ನೀಡಿದೆ. ಈ ಮೂವರು ಸೇರಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ 14 ಮಂದಿಯನ್ನು ನೇಮಕ ಮಾಡಿದೆ. ನಾವು ಸದ್ಯಕ್ಕೆ ಈ ಎಲ್ಲ ಮಂದಿಯನ್ನು ಸಿಜಿ ಆಸ್ಪತ್ರೆಯಲ್ಲಿಯೇ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.