ಕಾಲಿಗೆ ಏಟಾದ, ಜಾಂಡಿಸ್ ರೋಗಕ್ಕೆ ತುತ್ತಾದ ಹೀಗೆ ವಿವಿಧ ರೀತಿಯ ಗಂಭೀರ ಸಮಸ್ಯೆವುಳ್ಳವರು ಬೆಳಿಗ್ಗೆ 8ಕ್ಕೆ ಬಂದು ಆಸ್ಪತ್ರೆಯಲ್ಲಿ ಕಾದು ಕುಳಿತರೂ ಸಮರ್ಪಕ ಚಿಕಿತ್ಸೆ ದೊರಕಿಲ್ಲ ಎಂದು ರೋಗಿಗಳು ಸಚಿವರ ಬಳಿ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ಅವರ ಗಮನಕ್ಕೆ ತಂದು ಈ ರೀತಿ ತುರ್ತು ಮತ್ತು ಗಂಭೀರ ಸಮಸ್ಯೆ ಇರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಕಾಯುವಂತೆ ಮಾಡಬಾರದು. ತಕ್ಷಣವೇ ಚಿಕಿತ್ಸೆ ನೀಡಬೇಕು. ಹಾಗೂ ಈ ರೀತಿ ರೋಗಿಗಳಿಗೆ ಅನುಕೂಲ ಮಾಡದೇ ಇರುವ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸಬೇಕು ಎಂದಿ ಸಚಿವರು ಸೂಚನೆ ನೀಡಿದರು.