‘ಹಣ ಕೊಡುವುದಾಗಿ ಹೇಳಿ ನಾಗರಕಟ್ಟೆ ತಾಂಡಾದ ಸಚಿನ್ನಾಯ್ಕ ಹಾಗೂ ಈತನ ಚಿಕ್ಕಪ್ಪನ ಮಗ ಪುರುಷೋತ್ತಮನಾಯ್ಕ ಎಂಬುವರು ನನ್ನ ತಮ್ಮನನ್ನು ಧಾರವಾಡಕ್ಕೆ ಕರೆದುಕೊಂಡು ಹೋಗಿ ಒಂದು ವಾರ ಅಲ್ಲೇ ಇರಿಸಿಕೊಂಡಿದ್ದರೂ ಹಣ ನೀಡಿರಲಿಲ್ಲ. ಇದರಿಂದ ಬೇಸತ್ತು ಊರಿಗೆ ವಾಪಸ್ ಆಗಿದ್ದ. ಜುಲೈ 10ರಂದು ಕೆಲಸವಿದೆ ಎಂದು ಹೇಳಿ ಬೈಕ್ನಲ್ಲಿ ಹೋಗಿದ್ದು, ಈಗ ಶವವಾಗಿ ಪತ್ತೆಯಾಗಿದ್ದಾನೆ. ಈ ಇಬ್ಬರೇ ನನ್ನ ತಮ್ಮನ ಕೊಲೆ ಮಾಡಿದ್ದಾರೆ’ ಎಂದು ಮೃತನ ಸಹೋದರ ನಾಗರಾಜನಾಯ್ಕ ಬಸವಾಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.