ಎಪಿಎಂಸಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಬಾಲಚಂದ್ರಪ್ಪ (70) ಕೊಲೆಗೀಡಾದವರು. ಅವರ ಪತ್ನಿ ಇತ್ತೀಚೆಗೆ ನಿಧನರಾಗಿದ್ದರು. ಮಗ ಹರೀಶ್ ಜತೆ ವಾಸಿಸುತ್ತಿದ್ದು, ಹರೀಶ್ ಬುಧವಾರ ಹೊರಗೆ ಹೋಗಿದ್ದರು. ರಾತ್ರಿ 1 ಗಂಟೆಯ ಹೊತ್ತಿಗೆ ಮನೆಗೆ ಬಂದಾಗ ತಂದೆ ಕೊಲೆಗೀಡಾಗಿರುವುದು ಗೊತ್ತಾಗಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಳವಾಗಿಲ್ಲ. ಹಾಗಾಗಿ ಯಾರೋ ಗೊತ್ತಿರುವವರೇ ಕೊಲೆ ಮಾಡಿರಬೇಕು ಎಂದು ಶಂಕಿಸಲಾಗಿದೆ.