‘ಮದುವೆಗೆ ಹೋಗಲು ಆಕೆಯ ತಾಯಿ ಎರಡು ವಾರಗಳ ಹಿಂದೆ ಕರೆದುಕೊಂಡು ಹೋಗಿದ್ದರು. ಆನಂತರ ಶಾಲೆಗೆ ಬಂದಿಲ್ಲ. ಇವತ್ತು ಶಾಲೆಗೆ ಬಂದವಳನ್ನು ಮನೆಗೆ ನಾವು ಕಳುಹಿಸಿಯೇ ಇಲ್ಲ. ಶಾಲೆಗೆ ಬರುವ ಮೊದಲೇ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಬಂದಿರಬೇಕು. ಶಿಕ್ಷಣ ಇಲಾಖೆಯವರೂ ಈ ಬಗ್ಗೆ ವಿಚಾರಿಸಿದರು’ ಎಂದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕಲ್ಪಿತರಾಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.