‘ಕಣಗಳಲ್ಲಿ ಅಡಿಕೆ ಸಂಸ್ಕರಣೆಗೆ ದೊಡ್ಡ ಮನೆ, ಉಗ್ರಾಣ ನಿರ್ಮಿಸಿಕೊಂಡಿದ್ದು, ಜೂನ್ನಿಂದ ಜನವರಿವರೆಗೆ ಅಡಿಕೆ ಕೊಯ್ಲು, ಸಾಗಣೆ, ಹಸಿ ಅಡಿಕೆ ಸುಲಿದು ಬೇಯಿಸುವುದು, ಒಣಗಿಸುವುದು, ಪ್ರತ್ಯೇಕಿಸಿ ಚೀಲ ತುಂಬುವುದಕ್ಕೆ ಅಂದಾಜು 600 ಜನ ಮಹಿಳೆಯರಿಗೆ, 400 ಜನ ಪುರುಷರಿಗೆ ನಿತ್ಯ ಕೆಲಸ ನೀಡುತ್ತಿದ್ದೇವೆ. ರೈತರು ಮತ್ತು ಕೂಲಿಕಾರರಿಗೆ ಈ ಅಡಿಕೆ ಬೆಳೆ ಮತ್ತು ಸಂಸ್ಕರಣೆಯಿಂದ ಸಾಕಷ್ಟು ಲಾಭವಾಗಿದೆ. ಆದರೆ, ಒಂದಷ್ಟು ಲಾಭದ ನಿರೀಕ್ಷೆಯಲ್ಲಿದ್ದ ನಮ್ಮಂತಹ ಕೇಣಿದಾರರಿಗೆ ಹಾಕಿದ ಬಂಡವಾಳವೂ ದೊರೆಯುತ್ತಿಲ್ಲ’ ಎಂದವರು ಇಲ್ಲಿನ ಕೇಣಿದಾರ ಎಚ್.ಜಿ. ರವಿಕುಮಾರ್.