ಕೆಟಿಜೆ ನಗರ ಮತ್ತು ವಿದ್ಯಾನಗರದ ಪೊಲಿಸರಿಗೆ ಫೈರಿಂಗ್ ತರಬೇತಿ ನೀಡಿದ ಬಳಿಕ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಕಚೇರಿಗೆ ತರಬೇತಿ ನೀಡುವವರು ವಾಪಸ್ಸಾಗಿದ್ದರು. ಬಳಿಕ ಸಶಸ್ತ್ರಾಗಾರದ ಮುಖ್ಯಸ್ಥರಾದ ಶರತ್, ತನ್ವೀರ್ ಮತ್ತು ಶ್ರೀನಿವಾಸ ಪೂಜಾರಿ ಶಸ್ತ್ರಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಶ್ರೀನಿವಾಸ ಪೂಜಾರಿ ಅವರ ಕೈಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿದೆ. ಅದೇ ಸಮಯಕ್ಕೆ ಶಸ್ತ್ರಗಾರಕ್ಕೆ ಪ್ರವೇಶಿಸಿದ್ದ ಎಪಿಸಿ ಚೇತನ್ (29) ಅವರಿಗೆ ಗುಂಡು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದರು.