<p><strong>ದಾವಣಗೆರೆ:</strong> ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜೆಡಿಎಸ್ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಭಾನುವಾರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಹಿರಂಗಗೊಂಡಿತು. ಅಭ್ಯರ್ಥಿಗೆ ಮುಜುಗರದ ಸನ್ನಿವೇಶ ಸೃಷ್ಟಿಸಿತು.</p>.<p>ಅಭ್ಯರ್ಥಿ ಚೌಡರೆಡ್ಡಿ ಆರ್. ತೂಪಲ್ಲಿ ಅವರು ಹೋಟೆಲ್ ಶಾಂತಿಪಾರ್ಕ್ನಲ್ಲಿ ಬೆಳಿಗ್ಗೆ 10.30ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಜಸ್ಟಿನ್ ಜಯಕುಮಾರ್ ಮತ್ತು ತಂಡದವರು ಮಾಧ್ಯಮದವರಿಗೆ ಆಹ್ವಾನ ನೀಡಿದ್ದರು. ಮಧ್ಯಾಹ್ನ 12.20ಕ್ಕೆ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನು ಜಿಲ್ಲಾ ಸಮಿತಿ ಕರೆದಿತ್ತು.</p>.<p>ಜಸ್ಟಿನ್ ಜಯಕುಮಾರ್ (ಕುಮಾರನಾಯ್ಕ್), ಜೆಡಿಎಸ್ ನಾಯಕರಾದ ಗುಡ್ಡಪ್ಪ, ಗೋಣಿವಾಡ ಮಂಜುನಾಥ, ಮಂಜುಳಾ, ಸಂಗನಗೌಡ, ಶ್ರೀಧರ ಪಾಟೀಲ್, ಮಳಲ್ಕೆರೆ ಪ್ರಕಾಶ್, ಶಿವಣ್ಣ, ಅನೀಸ್ ಪಾಶಾ ಮುಂತಾದವರು ಅಭ್ಯರ್ಥಿ ಬರುವುದನ್ನೇ ಕಾಯುತ್ತಾ ಕುಳಿತಿದ್ದರು.</p>.<p>ದಾವಣಗೆರೆಯಲ್ಲೇ ಇದ್ದರೂ ಮಧ್ಯಾಹ್ನ 12 ಗಂಟೆಯ ವರೆಗೆ ಚೌಡರೆಡ್ಡಿ ಅವರು ಶಾಂತಿಪಾರ್ಕ್ ಕಡೆ ಬರಲಿಲ್ಲ. ಬಳಿಕ ಬಂದರಾದರೂ, ‘ಇಲ್ಲಿ ಪತ್ರಿಕಾಗೋಷ್ಠಿ ಕರೆದಿಲ್ಲ. 12.20ಕ್ಕೆ ಅಷ್ಟೇ ಕರೆದಿದ್ದು, ಅಲ್ಲೇ ಬರಬೇಕು’ ಎಂದು ಆಹ್ವಾನಿಸಿ ಹೊರಟರು.</p>.<p>‘ಇಂದಿನ ಸಭೆಗೆ ಜಿಲ್ಲಾ ಸಮಿತಿ ನಮಗೆ ಆಹ್ವಾನ ನೀಡಿಲ್ಲ. ಎಲ್ಲರನ್ನೂ ಕರೆದು ಮಾಡಬೇಕಿತ್ತು. ನಾವು ಜೆಡಿಎಸ್ನ ನಿಷ್ಠಾವಂತ ಕಾರ್ಯಕರ್ತರಾಗಿ ಚೌಡರೆಡ್ಡಿ ಪರ ಕೆಲಸ ಮಾಡುತ್ತೇವೆ’ ಎಂದು ಬಳಿಕ ಜಸ್ಟಿನ್ ಜಯಕುಮಾರ್ ಸ್ಪಷ್ಟನೆ ನೀಡಿದರು.</p>.<p>ಜಿಲ್ಲಾ ಸಮಿತಿ ನಡೆಸಿಕೊಂಡಿರುವ ರೀತಿ ಸರಿ ಇಲ್ಲ ಎಂದು ಜೆಡಿಎಸ್ನ ಕೆಲವರು ಹೊರಗೆ ಅಸಮಾಧಾನ ತೋಡಿಕೊಂಡರು.</p>.<p>ಯಾರೆಂದೇ ಗೊತ್ತಿಲ್ಲ: ‘ಶಾಂತಿಪಾರ್ಕ್ನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದವರು ಯಾರು ಎಂಬುದೇ ಗೊತ್ತಿಲ್ಲ. ಸಣ್ಣಪುಟ್ಟ ಗೊಂದಲಗಳು ಎಲ್ಲ ಪಕ್ಷಗಳಲ್ಲಿ ಇರುವುದು ಸಹಜ. ಅವೆಲ್ಲವನ್ನು ಸರಿಮಾಡಿಕೊಂಡು ಹೋಗುತ್ತೇವೆ. ಈ ಭಾಗದಿಂದ ಯಾರೂ ಟಿಕೆಟ್ ಕೇಳಿಲ್ಲ’ ಎಂದು ಬಳಿಕ ಚೌಡರೆಡ್ಡಿ ಸ್ಪಷ್ಟನೆ ನೀಡಿದರು.</p>.<p>‘ಯಾರದೋ ಹೆಗಲ ಮೇಲೆ ಕುಳಿತು ನಾನೂ ಪೈಲ್ವಾನ್ ಎಂದು ಹೇಳಿಕೊಳ್ಳುವುದು ಸುಲಭ. ಅಖಾಡಕ್ಕಿಳಿದು ಸಡ್ಡು ಹೊಡೆಯುವುದು ಸುಲಭವಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದರೆ ಅದಕ್ಕೆ ಬೇಕಾದಷ್ಟು ತಯಾರಿ ಮಾಡಿಕೊಳ್ಳಬೇಕು’ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಟಾಂಗ್ ನೀಡಿದರು.</p>.<p>‘ಪದವೀಧರ ಕ್ಷೇತ್ರದ ಆಕಾಂಕ್ಷಿಯಾ ಎಂದು ನನ್ನಲ್ಲಿ ದೇವೇಗೌಡ, ಕುಮಾರಸ್ವಾಮಿ ವಿಚಾರಿಸಿದ್ದರು. ನಾನು ವಿಧಾನಸಭೆಗೆ ಹರಿಹರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಹಾಗಾಗಿ ನಮ್ಮ ಬೆಂಬಲ ಚೌಡರೆಡ್ಡಿಗೆ ಎಂದು ತಿಳಿಸಿದ್ದೆ. ಜಿಲ್ಲಾ ಸಮಿತಿ ಕೂಡ ಅವರಿಗೆ ಬೆಂಬಲ ಸೂಚಿಸಿ ನಿರ್ಣಯ ಕೈಗೊಂಡಿದೆ’ ಎಂದು ಸ್ಪಷ್ಟನೆ ನೀಡಿದರು.</p>.<p>ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ಅಮಾನುಲ್ಲಾ ಖಾನ್, ಗಣೇಶ್ ದಾಸ್ ಕರಿಯಪ್ಪ, ಎ.ಕೆ. ನಾಗಪ್ಪ, ಅಂಜಿನಪ್ಪ, ಶೀಲಾ ಕುಮಾರ್, ಧನಂಜಯ, ಹನುಮಂತಪ್ಪ ಅವರೂ ಇದ್ದರು.</p>.<p>ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದಪ್ಪ ಅನಾರೋಗ್ಯದ ಕಾರಣ ಎರಡೂ ಕಡೆಗಳಲ್ಲಿ ಭಾಗವಹಿಸಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜೆಡಿಎಸ್ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಭಾನುವಾರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಹಿರಂಗಗೊಂಡಿತು. ಅಭ್ಯರ್ಥಿಗೆ ಮುಜುಗರದ ಸನ್ನಿವೇಶ ಸೃಷ್ಟಿಸಿತು.</p>.<p>ಅಭ್ಯರ್ಥಿ ಚೌಡರೆಡ್ಡಿ ಆರ್. ತೂಪಲ್ಲಿ ಅವರು ಹೋಟೆಲ್ ಶಾಂತಿಪಾರ್ಕ್ನಲ್ಲಿ ಬೆಳಿಗ್ಗೆ 10.30ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಜಸ್ಟಿನ್ ಜಯಕುಮಾರ್ ಮತ್ತು ತಂಡದವರು ಮಾಧ್ಯಮದವರಿಗೆ ಆಹ್ವಾನ ನೀಡಿದ್ದರು. ಮಧ್ಯಾಹ್ನ 12.20ಕ್ಕೆ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನು ಜಿಲ್ಲಾ ಸಮಿತಿ ಕರೆದಿತ್ತು.</p>.<p>ಜಸ್ಟಿನ್ ಜಯಕುಮಾರ್ (ಕುಮಾರನಾಯ್ಕ್), ಜೆಡಿಎಸ್ ನಾಯಕರಾದ ಗುಡ್ಡಪ್ಪ, ಗೋಣಿವಾಡ ಮಂಜುನಾಥ, ಮಂಜುಳಾ, ಸಂಗನಗೌಡ, ಶ್ರೀಧರ ಪಾಟೀಲ್, ಮಳಲ್ಕೆರೆ ಪ್ರಕಾಶ್, ಶಿವಣ್ಣ, ಅನೀಸ್ ಪಾಶಾ ಮುಂತಾದವರು ಅಭ್ಯರ್ಥಿ ಬರುವುದನ್ನೇ ಕಾಯುತ್ತಾ ಕುಳಿತಿದ್ದರು.</p>.<p>ದಾವಣಗೆರೆಯಲ್ಲೇ ಇದ್ದರೂ ಮಧ್ಯಾಹ್ನ 12 ಗಂಟೆಯ ವರೆಗೆ ಚೌಡರೆಡ್ಡಿ ಅವರು ಶಾಂತಿಪಾರ್ಕ್ ಕಡೆ ಬರಲಿಲ್ಲ. ಬಳಿಕ ಬಂದರಾದರೂ, ‘ಇಲ್ಲಿ ಪತ್ರಿಕಾಗೋಷ್ಠಿ ಕರೆದಿಲ್ಲ. 12.20ಕ್ಕೆ ಅಷ್ಟೇ ಕರೆದಿದ್ದು, ಅಲ್ಲೇ ಬರಬೇಕು’ ಎಂದು ಆಹ್ವಾನಿಸಿ ಹೊರಟರು.</p>.<p>‘ಇಂದಿನ ಸಭೆಗೆ ಜಿಲ್ಲಾ ಸಮಿತಿ ನಮಗೆ ಆಹ್ವಾನ ನೀಡಿಲ್ಲ. ಎಲ್ಲರನ್ನೂ ಕರೆದು ಮಾಡಬೇಕಿತ್ತು. ನಾವು ಜೆಡಿಎಸ್ನ ನಿಷ್ಠಾವಂತ ಕಾರ್ಯಕರ್ತರಾಗಿ ಚೌಡರೆಡ್ಡಿ ಪರ ಕೆಲಸ ಮಾಡುತ್ತೇವೆ’ ಎಂದು ಬಳಿಕ ಜಸ್ಟಿನ್ ಜಯಕುಮಾರ್ ಸ್ಪಷ್ಟನೆ ನೀಡಿದರು.</p>.<p>ಜಿಲ್ಲಾ ಸಮಿತಿ ನಡೆಸಿಕೊಂಡಿರುವ ರೀತಿ ಸರಿ ಇಲ್ಲ ಎಂದು ಜೆಡಿಎಸ್ನ ಕೆಲವರು ಹೊರಗೆ ಅಸಮಾಧಾನ ತೋಡಿಕೊಂಡರು.</p>.<p>ಯಾರೆಂದೇ ಗೊತ್ತಿಲ್ಲ: ‘ಶಾಂತಿಪಾರ್ಕ್ನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದವರು ಯಾರು ಎಂಬುದೇ ಗೊತ್ತಿಲ್ಲ. ಸಣ್ಣಪುಟ್ಟ ಗೊಂದಲಗಳು ಎಲ್ಲ ಪಕ್ಷಗಳಲ್ಲಿ ಇರುವುದು ಸಹಜ. ಅವೆಲ್ಲವನ್ನು ಸರಿಮಾಡಿಕೊಂಡು ಹೋಗುತ್ತೇವೆ. ಈ ಭಾಗದಿಂದ ಯಾರೂ ಟಿಕೆಟ್ ಕೇಳಿಲ್ಲ’ ಎಂದು ಬಳಿಕ ಚೌಡರೆಡ್ಡಿ ಸ್ಪಷ್ಟನೆ ನೀಡಿದರು.</p>.<p>‘ಯಾರದೋ ಹೆಗಲ ಮೇಲೆ ಕುಳಿತು ನಾನೂ ಪೈಲ್ವಾನ್ ಎಂದು ಹೇಳಿಕೊಳ್ಳುವುದು ಸುಲಭ. ಅಖಾಡಕ್ಕಿಳಿದು ಸಡ್ಡು ಹೊಡೆಯುವುದು ಸುಲಭವಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದರೆ ಅದಕ್ಕೆ ಬೇಕಾದಷ್ಟು ತಯಾರಿ ಮಾಡಿಕೊಳ್ಳಬೇಕು’ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಟಾಂಗ್ ನೀಡಿದರು.</p>.<p>‘ಪದವೀಧರ ಕ್ಷೇತ್ರದ ಆಕಾಂಕ್ಷಿಯಾ ಎಂದು ನನ್ನಲ್ಲಿ ದೇವೇಗೌಡ, ಕುಮಾರಸ್ವಾಮಿ ವಿಚಾರಿಸಿದ್ದರು. ನಾನು ವಿಧಾನಸಭೆಗೆ ಹರಿಹರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಹಾಗಾಗಿ ನಮ್ಮ ಬೆಂಬಲ ಚೌಡರೆಡ್ಡಿಗೆ ಎಂದು ತಿಳಿಸಿದ್ದೆ. ಜಿಲ್ಲಾ ಸಮಿತಿ ಕೂಡ ಅವರಿಗೆ ಬೆಂಬಲ ಸೂಚಿಸಿ ನಿರ್ಣಯ ಕೈಗೊಂಡಿದೆ’ ಎಂದು ಸ್ಪಷ್ಟನೆ ನೀಡಿದರು.</p>.<p>ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ಅಮಾನುಲ್ಲಾ ಖಾನ್, ಗಣೇಶ್ ದಾಸ್ ಕರಿಯಪ್ಪ, ಎ.ಕೆ. ನಾಗಪ್ಪ, ಅಂಜಿನಪ್ಪ, ಶೀಲಾ ಕುಮಾರ್, ಧನಂಜಯ, ಹನುಮಂತಪ್ಪ ಅವರೂ ಇದ್ದರು.</p>.<p>ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದಪ್ಪ ಅನಾರೋಗ್ಯದ ಕಾರಣ ಎರಡೂ ಕಡೆಗಳಲ್ಲಿ ಭಾಗವಹಿಸಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>