<p><strong>ಮಲೇಬೆನ್ನೂರು: </strong>ಹೋಬಳಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ಪತ್ತೆ ಮಾಡುವ ನಿಟ್ಟಿನಲ್ಲಿ ಖಾಸಗಿ ವೈದ್ಯರು ಸಹಕರಿಸಿ ಎಂದು ಟಿಎಚ್ಒ ಡಾ. ಚಂದ್ರಮೋಹನ್ ಕೋರಿದರು.</p>.<p>ಪಟ್ಟಣದ ಪುರಸಭೆಯಲ್ಲಿ ಬುಧವಾರ ಖಾಸಗಿ ವೈದ್ಯರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.</p>.<p>ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆ ರೋಗಿಗಳು ಗುಂಪುಗೂಡದಂತೆ ನೋಡಿಕೊಳ್ಳಿ. ಜ್ವರ ,ಶೀತ, ಕೆಮ್ಮು, ನೆಗಡಿ ಕಂಡು ಬಂದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊರೊನಾ ಪತ್ತೆ ಪರೀಕ್ಷೆಗೆ ಕಳುಹಿಸಿಕೊಡಬೇಕು.ಸಾಕಷ್ಟು ಪ್ರಕರಣಗಳಲ್ಲಿ ರೋಗಿಯ ಆರೋಗ್ಯ ಸ್ಥಿತಿ ಕೈ ಮೀರಿದಾಗ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.</p>.<p>ಡಾ. ಹನುಮಂತಪ್ಪ, ಡಾ. ಶ್ರೀನಿವಾಸ್, ‘ರೋಗಿಗಳ ಸಂಖ್ಯೆ ಹೆಚ್ಚು ಇದೆ. ನಾವು ಕೂಡ ಸಾಕಷ್ಟು ಎಚ್ಚರಿಕೆ ನೀಡುತ್ತೇವೆ. ಆದರೆ ಜನರು ಸಹಕರಿಸುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.</p>.<p>ಡಾ. ಬಿ. ಚಂದ್ರಶೇಖರ್, ‘ಗ್ರಾಮೀಣ ಭಾಗದ ಕೊಕ್ಕನೂರು, ಕುಂಬಳೂರು, ಹರಳಹಳ್ಳಿ ಕಡೆ ಜನರಲ್ಲಿ ಜ್ವರ, ಶೀತ ಹೆಚ್ಚಾಗಿದೆ.ಆಸ್ಪತ್ರೆಗೆ ಚಿಕಿತ್ಸೆ ಬರುವ ರೋಗಿಗಳನ್ನು ನಿಯಂತ್ರಿ<br />ಸಲು ಪೊಲೀಸರ ಮೊರೆ ಹೋಗಿ<br />ದ್ದೇವೆ.ಬಹುತೇಕ ಭಾಗದಲ್ಲಿ ರೋಗ ಪೀಡಿತರು ಸ್ವಯಂ ವೈದ್ಯರಾಗಿದ್ದಾರೆ. ಔಷಧದ ಅಂಗಡಿಗಳಿಂದ ಮಾತ್ರೆ ಪಡೆದು, ಗಂಭೀರ ಸಮಸ್ಯೆಯಾದಾಗ ಆಸ್ಪತ್ರೆಗೆ ಬರುತ್ತಾರೆ’ ಎಂದರು.</p>.<p>ಪುರಸಭೆ ಮುಖ್ಯಾಧಿಕಾರಿ ದಿನಕರ್, ‘ವೈದ್ಯರು ಅಂತರ ಪಾಲಿಸಬೇಕು. ಜನ ಗುಂಪುಗೂಡದಂತೆ ಎಚ್ಚರಿಕೆ ವಹಿಸಬೇಕು.ಆಸ್ಪತ್ರೆ ಸುತ್ತಲಿನ ಜನವಸತಿ ಪ್ರದೇಶದ ನಾಗರಿಕರಿಗೆ ತೊಂದರೆಯಾಗಿ ದೂರು ನೀಡಿದರೆ ಕ್ರಮ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.</p>.<p>ಡಾ. ಹರೀಶ್ ತೋಳಾರ್, ಡಾ. ಅಪೂರ್ವ, ಡಾ. ಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಪತ್ತೆ ಕಿಟ್ ವ್ಯವಸ್ಥೆ ಮಾಡುವಂತೆ ಕೋರಿದರು.</p>.<p>ಉಪತಹಶೀಲ್ದಾರ್ ಆರ್. ರವಿ, ಹಿರಿಯ ಆರೋಗ್ಯ ನಿರೀಕ್ಷಕ ಉಮ್ಮಣ್ಣ, ಪರಿಸರ ಎಂಜಿನಿಯರ್ ಉಮೇಶ್, ಆರೋಗ್ಯ ಕೇಂದ್ರದ ಕಿರಣ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಹೋಬಳಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ಪತ್ತೆ ಮಾಡುವ ನಿಟ್ಟಿನಲ್ಲಿ ಖಾಸಗಿ ವೈದ್ಯರು ಸಹಕರಿಸಿ ಎಂದು ಟಿಎಚ್ಒ ಡಾ. ಚಂದ್ರಮೋಹನ್ ಕೋರಿದರು.</p>.<p>ಪಟ್ಟಣದ ಪುರಸಭೆಯಲ್ಲಿ ಬುಧವಾರ ಖಾಸಗಿ ವೈದ್ಯರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.</p>.<p>ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆ ರೋಗಿಗಳು ಗುಂಪುಗೂಡದಂತೆ ನೋಡಿಕೊಳ್ಳಿ. ಜ್ವರ ,ಶೀತ, ಕೆಮ್ಮು, ನೆಗಡಿ ಕಂಡು ಬಂದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊರೊನಾ ಪತ್ತೆ ಪರೀಕ್ಷೆಗೆ ಕಳುಹಿಸಿಕೊಡಬೇಕು.ಸಾಕಷ್ಟು ಪ್ರಕರಣಗಳಲ್ಲಿ ರೋಗಿಯ ಆರೋಗ್ಯ ಸ್ಥಿತಿ ಕೈ ಮೀರಿದಾಗ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.</p>.<p>ಡಾ. ಹನುಮಂತಪ್ಪ, ಡಾ. ಶ್ರೀನಿವಾಸ್, ‘ರೋಗಿಗಳ ಸಂಖ್ಯೆ ಹೆಚ್ಚು ಇದೆ. ನಾವು ಕೂಡ ಸಾಕಷ್ಟು ಎಚ್ಚರಿಕೆ ನೀಡುತ್ತೇವೆ. ಆದರೆ ಜನರು ಸಹಕರಿಸುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.</p>.<p>ಡಾ. ಬಿ. ಚಂದ್ರಶೇಖರ್, ‘ಗ್ರಾಮೀಣ ಭಾಗದ ಕೊಕ್ಕನೂರು, ಕುಂಬಳೂರು, ಹರಳಹಳ್ಳಿ ಕಡೆ ಜನರಲ್ಲಿ ಜ್ವರ, ಶೀತ ಹೆಚ್ಚಾಗಿದೆ.ಆಸ್ಪತ್ರೆಗೆ ಚಿಕಿತ್ಸೆ ಬರುವ ರೋಗಿಗಳನ್ನು ನಿಯಂತ್ರಿ<br />ಸಲು ಪೊಲೀಸರ ಮೊರೆ ಹೋಗಿ<br />ದ್ದೇವೆ.ಬಹುತೇಕ ಭಾಗದಲ್ಲಿ ರೋಗ ಪೀಡಿತರು ಸ್ವಯಂ ವೈದ್ಯರಾಗಿದ್ದಾರೆ. ಔಷಧದ ಅಂಗಡಿಗಳಿಂದ ಮಾತ್ರೆ ಪಡೆದು, ಗಂಭೀರ ಸಮಸ್ಯೆಯಾದಾಗ ಆಸ್ಪತ್ರೆಗೆ ಬರುತ್ತಾರೆ’ ಎಂದರು.</p>.<p>ಪುರಸಭೆ ಮುಖ್ಯಾಧಿಕಾರಿ ದಿನಕರ್, ‘ವೈದ್ಯರು ಅಂತರ ಪಾಲಿಸಬೇಕು. ಜನ ಗುಂಪುಗೂಡದಂತೆ ಎಚ್ಚರಿಕೆ ವಹಿಸಬೇಕು.ಆಸ್ಪತ್ರೆ ಸುತ್ತಲಿನ ಜನವಸತಿ ಪ್ರದೇಶದ ನಾಗರಿಕರಿಗೆ ತೊಂದರೆಯಾಗಿ ದೂರು ನೀಡಿದರೆ ಕ್ರಮ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.</p>.<p>ಡಾ. ಹರೀಶ್ ತೋಳಾರ್, ಡಾ. ಅಪೂರ್ವ, ಡಾ. ಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಪತ್ತೆ ಕಿಟ್ ವ್ಯವಸ್ಥೆ ಮಾಡುವಂತೆ ಕೋರಿದರು.</p>.<p>ಉಪತಹಶೀಲ್ದಾರ್ ಆರ್. ರವಿ, ಹಿರಿಯ ಆರೋಗ್ಯ ನಿರೀಕ್ಷಕ ಉಮ್ಮಣ್ಣ, ಪರಿಸರ ಎಂಜಿನಿಯರ್ ಉಮೇಶ್, ಆರೋಗ್ಯ ಕೇಂದ್ರದ ಕಿರಣ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>