‘ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ದಾದಾಪಿರ್ ಅಸಾದುಲ್ಲಾನಿಗೆ ಹರಪನಹಳ್ಳಿ, ಲೋಕಿಕೆರೆ, ಬಿ.ಎಂ. ಲೇಔಟ್ಗಳಲ್ಲಿ ₹25 ಕೋಟಿಗೂ ಹೆಚ್ಚು ಬೆಲೆ ಬಾಳುವ ಬೇನಾಮಿ ಆಸ್ತಿ ಇದೆ. ಎರಡು ವರ್ಷಗಳ ಹಿಂದೆ ಈತನ ಬಳಿ ಏನು ಇರಲಿಲ್ಲ. ಈಗ ಇವನ ಕುಟುಂಬದವರ ಬಳಿ ಕೆಜಿಗಟ್ಟಲೆ ಚಿನ್ನ ಆಸ್ತಿ, ಬಂಗಲೆ, ಇಂಟರ್ ನ್ಯಾಷನಲ್ ಸ್ಕೂಲ್ಗಳು ಇವೆ. ಇದು ಹೇಗೆ ಬಂತು ಎಂದು ತನಿಖೆ ಮಾಡಬೇಕು’ ಎಂದು ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದರು.