<p><strong>ಬಸವಾಪಟ್ಟಣ:</strong> ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿರುವ 300 ಎಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಬಹುಪಾಲು ಮುಗಿದಿದ್ದರೂ ಹೊಲಗಳಲ್ಲಿ ಸಸಿಗಳು ಚಿಗುರೊಡೆದಿಲ್ಲ.</p>.<p>ಮಳೆ ಕೊರತೆ ನಡುವೆಯೇ ರೈತರು ಹತ್ತಿ ಬೀಜ ಬಿತ್ತಿದ್ದರು. ಮೊಳಕೆಯೊಡೆದು ಹೊರಬಂದ ಸಸಿಗಳಿಗೆ ಈಗ ಎಡೆಕುಂಟೆ ಹೊಡೆಯುತ್ತಿದ್ದಾರೆ. </p>.<p>ಎಲ್ಲಾ ಕಡೆ ಸಾಕಷ್ಟು ಮಳೆ ಆಗುತ್ತಿದೆ. ಆದರೆ, ಈ ಭಾಗದಲ್ಲಿ ಮಳೆ ಕಡಿಮೆಯಾಗಿದೆ ಎಂದು ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಬಿ.ಎಲ್.ಅವಿನಾಶ್ ತಿಳಿಸಿದ್ದಾರೆ. </p>.<p>‘ಈ ವರ್ಷವೂ ಮಳೆ ಸಾಕಷ್ಟು ಬೀಳುತ್ತಿಲ್ಲ. ಮುಂದೆ ಪುನರ್ವಸು, ಪುಷ್ಯ ಮಳೆಗಳು ಬರಬಹುದು ಎಂಬ ನಂಬಿಕೆಯಿಟ್ಟು ಬಿತ್ತನೆ ಮಾಡಿದ್ದೇವೆ. ಮಳೆ ಕೈಕೊಟ್ಟರ ಮೆಕ್ಕೆಜೋಳ ಬೀಜ ಬಿತ್ತಿದ್ದು ವಿಫಲವಾಗುತ್ತದೆ’ ಎಂದು ಗುಡ್ಡದ ಕೊಮಾರನಹಳ್ಳಿ ವೀರೇಶನಾಯ್ಕ, ನಿಲೋಗಲ್ ರಂಗಪ್ಪ ಹಾಗೂ ಶೃಂಗಾರಬಾಗ್ ತಾಂಡಾದ ಶೇಖರನಾಯ್ಕ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ:</strong> ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿರುವ 300 ಎಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಬಹುಪಾಲು ಮುಗಿದಿದ್ದರೂ ಹೊಲಗಳಲ್ಲಿ ಸಸಿಗಳು ಚಿಗುರೊಡೆದಿಲ್ಲ.</p>.<p>ಮಳೆ ಕೊರತೆ ನಡುವೆಯೇ ರೈತರು ಹತ್ತಿ ಬೀಜ ಬಿತ್ತಿದ್ದರು. ಮೊಳಕೆಯೊಡೆದು ಹೊರಬಂದ ಸಸಿಗಳಿಗೆ ಈಗ ಎಡೆಕುಂಟೆ ಹೊಡೆಯುತ್ತಿದ್ದಾರೆ. </p>.<p>ಎಲ್ಲಾ ಕಡೆ ಸಾಕಷ್ಟು ಮಳೆ ಆಗುತ್ತಿದೆ. ಆದರೆ, ಈ ಭಾಗದಲ್ಲಿ ಮಳೆ ಕಡಿಮೆಯಾಗಿದೆ ಎಂದು ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಬಿ.ಎಲ್.ಅವಿನಾಶ್ ತಿಳಿಸಿದ್ದಾರೆ. </p>.<p>‘ಈ ವರ್ಷವೂ ಮಳೆ ಸಾಕಷ್ಟು ಬೀಳುತ್ತಿಲ್ಲ. ಮುಂದೆ ಪುನರ್ವಸು, ಪುಷ್ಯ ಮಳೆಗಳು ಬರಬಹುದು ಎಂಬ ನಂಬಿಕೆಯಿಟ್ಟು ಬಿತ್ತನೆ ಮಾಡಿದ್ದೇವೆ. ಮಳೆ ಕೈಕೊಟ್ಟರ ಮೆಕ್ಕೆಜೋಳ ಬೀಜ ಬಿತ್ತಿದ್ದು ವಿಫಲವಾಗುತ್ತದೆ’ ಎಂದು ಗುಡ್ಡದ ಕೊಮಾರನಹಳ್ಳಿ ವೀರೇಶನಾಯ್ಕ, ನಿಲೋಗಲ್ ರಂಗಪ್ಪ ಹಾಗೂ ಶೃಂಗಾರಬಾಗ್ ತಾಂಡಾದ ಶೇಖರನಾಯ್ಕ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>