ಹತ್ತಾರು ಶಾಲೆಗಳ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆ 6.30ಕ್ಕೆ ಕವಾಯತು ಪ್ರದರ್ಶನ ನೀಡಲು ಆಗಮಿಸುತ್ತಾರೆ. ಮುಂಜಾನೆಯೆ ಮನೆ ಬಿಟ್ಟು ಬರುವ ವಿದ್ಯಾರ್ಥಿಗಳು 11 ಗಂಟೆವರೆಗೂ, ಕನಿಷ್ಠ ನಾಲ್ಕು ತಾಸು ಬಿಸಿಲು ಮತ್ತು ಧೂಳಿನಲ್ಲಿ ನಿಂತಿರುತ್ತಾರೆ. ಒಣ ಹವೆ ಇರುವುದರಿಂದ ಬಿರು ಬಿಸಿಲಿಗೆ ಬಾಯಾರಿಕೆ ಆಗುತ್ತದೆ. ಆದಕಾರಣ ಶುದ್ಧವಾದ ಕುಡಿಯುವ ನೀರು, ಲಘು ತಿಂಡಿಯ ವ್ಯವಸ್ಥೆ ಮಾಡಬೇಕು ಎಂದು ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರಿಗೆ ಅವರು ಆಗ್ರಹಿಸಿದ್ದಾರೆ.