ತಾಲ್ಲೂಕಿನ 15ಕ್ಕೂ ಹೆಚ್ಚು ಗ್ರಾಮಗಳು ನದಿ ತೀರದಲ್ಲಿವೆ. ಆ ಗ್ರಾಮಗಳ ಪೈಕಿ ಬಿಳಸನೂರು, ಹಲಸಬಾಳು, ಗುತ್ತೂರು, ಸಾರಥಿ, ಚಿಕ್ಕಬಿದರಿ ಗ್ರಾಮಗಳು ಹಾಗೂ ಹರಿಹರದ ಮರ್ನಾಲ್ಕು ಜನವಸತಿ ಪ್ರದೇಶಗಳಿಗೆ ನದಿ ನೀರು ನುಗ್ಗುವ ಸಾಧ್ಯತೆ ಇರುತ್ತದೆ. ಎಚ್ಚರಿಕೆಯ ಮಟ್ಟ 12 ಮೀಟರ್ ಇದ್ದರೂ 11 ಮೀಟರ್ವರೆಗೆ ನೀರು ಹರಿದರೂ ಕೂಡ ನದಿ ನೀರು ಜನವಸತಿ ಪ್ರದೇಶ ಹಾಗೂ ಜಮೀನು, ತೋಟಗಳಿಗೆ ಹರಿಯುವ ಅಪಾಯ ಇದೆ.