ಸೋಮವಾರದಿಂದಲೇ ಹಬ್ಬದ ವಾತಾವರಣ ಇತ್ತು. ಮಂಗಳವಾರ ಬ್ರಾಹ್ಮಿ ಮೂಹೂರ್ತದಲ್ಲಿ ದೇವರ ಮೂರ್ತಿಗಳಿಗೆ ಅಲಂಕಾರ, ಅಭಿಷೇಕ ಜರುಗುತ್ತವೆ. ನಂತರ ದೊಡ್ಡ ಬಾಳೆ ಎಲೆಗಳನ್ನು ದೇವರ ಮುಂದೆ ಹರಡಿ ಬಾಳೆಹಣ್ಣಿನ ಎಡೆಯನ್ನು ಸಮರ್ಪಿಸುವುದು ವಿಶೇಷ. ಈ ವರ್ಷ ತಾವು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಕಾರ್ಯ ಫಲಿಸಿದವರು ಹರಕೆ ತೀರಿಸುವ ರೂಢಿ ಇದೆ. ಈ ಆಚರಣೆ ಮೂಲಕ ಸಮಾಜದ ಏಕತೆಯ ಸಂದೇಶ ಸಾರಲಾಗುತ್ತದೆ.