ಕಾಲುವೆಯ ಅಕ್ಕಪಕ್ಕ ಮಣ್ಣಿನ ಮೇಲೆಯೇ ಸಿಮೆಂಟ್ ಕಾಂಕ್ರೀಟ್ ಹಾಕುತ್ತಿದ್ದಾರೆ. ಕಾಲುವೆಯ ನೀರು ಎಲ್ಲಿ ಬಸಿದು ಪೋಲಾಗುತ್ತಿದೆ ಎಂಬುದನ್ನು ಗಮನಿಸಿಲ್ಲ. 4ನೇ ಗೇಟ್ ಬಳಿ ಕಾಲುವೆ ದೊಂಬು ಬಿದ್ದಿದ್ದು, ನೀರು ಬಿಟ್ಟಾಗ ಸುಮಾರು 15 ಎಕರೆ ಭತ್ತದ ಗದ್ದೆ ಮೇಲೆ ಹರಿದು ಫಸಲು ನಷ್ಟವಾಗುತ್ತದೆ. ಇಲ್ಲಿ ದುರಸ್ತಿ ಸರಿಯಾಗಿ ಮಾಡಿದರೆ ನೀರು ಸರಾಗವಾಗಿ ಹರಿದು ಈ ಭಾಗದ ಮತ್ತು ಮುಂದಿನ ಭಾಗದ ರೈತರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಉಪಯೋಗವಾಗಿಲ್ಲ ಎಂದು ರೈತರಾದ ಸಾಲಬಾಳು ಎಸ್.ಎನ್. ಗೋಪಾಲನಾಯ್ಕ, ಸೋಗಿಲು ರಾಜು, ಪರಮೇಶ್ವರಪ್ಪ, ದಾನೇಶಪ್ಪ ದೂರಿದರು.