ಬಳಿಕ ಮಾತನಾಡಿ, ‘ಭಾರತ ಕೃಷಿಕರ ನಾಡು. ಈ ದೇಶದಲ್ಲಿ ಬಲಿಪಾಡ್ಯಮಿ ಸೇರಿ ವಿವಿಧ ಹಬ್ಬಗಳಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ನಾವೂ ಇಂದಿಗೂ ಗೋವುಗಳಿಗೆ ಪೂಜೆ ಸಲ್ಲಿಸುತ್ತಿದ್ದು, ಸರ್ಕಾರ ಇದೊಂದು ಸರ್ಕಾರಿ ಕಾರ್ಯಕ್ರಮವಾಗಿ ಏಕೆ ರೂಪಿಸಿದೆ ಎಂದು ತಿಳಿದಿಲ್ಲ. ಸಂಪ್ರದಾಯದಂತೆ ನಾವು ಪೂಜೆ ಸಲ್ಲಿಸುತ್ತೇವೆ’ ಎಂದರು.