ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ‘ವಡ್ನಾಳ್, ಹೆಬ್ಬಳಗೆರೆ, ಬೆಂಕಿಕೆರೆ ಹಾಗೂ ಹೊದಿಗೆರೆ ಗ್ರಾಮದ ಕೆರೆಗಳನ್ನು ಮುಂದುವರಿದ ಕಾಮಗಾರಿ ಅಡಿ ತುಂಬಿಸಲು ₹ 11.50 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕಾಮಗಾರಿ ಮುಗಿದಿದ್ದು, ವಡ್ನಾಳ್, ಹೆಬ್ಬಳಗೆರೆ ಮತ್ತು ಬೆಂಕಿಕರೆ ಗ್ರಾಮದ ಕೆರೆಗಳು ತುಂಬಿವೆ. ಇನ್ನು ಹೊದಿಗೆರೆ ಗ್ರಾಮದ ಕೆರೆಗೆ ಹೋಗುವ ಪೈಪ್ ಹೊಡೆದು ಹೋಗಿದ್ದು ಶೀಘ್ರದಲ್ಲಿ ಹೊಸ ಪೈಪ್ ಅಳವಡಿಸಿ ಕೆರೆಯನ್ನು ತುಂಬಿಸಲಾಗುವುದು ಎಂದು ಹೇಳಿದರು.