<p><strong>ಮಲೇಬೆನ್ನೂರು:</strong> ಕುಸುಮ್ ಯೋಜನೆಯಡಿ ರೈತರ ಜಮೀನುಗಳ ಕೊಳವೆಬಾವಿಯಿಂದ ನೀರೆತ್ತಲು ಸೋಲಾರ್ ಪಂಪ್ಸೆಟ್ ಅಳವಡಿಸುವ ಯೋಜನೆಯ ಲಾಭ ಪಡೆಯುವಂತೆ ಶನಿವಾರ ಶಾಸಕ ಬಿ.ಪಿ. ಹರೀಶ್ ಮನವಿ ಮಾಡಿದರು.</p>.<p>ಸಮೀಪದ ಜಿಗಳಿ ಗ್ರಾಮದ ರೈತ ಜಯಪ್ಪ ನಿರ್ಮಿಸಿದ ಸೋಲಾರ್ ಪಂಪ್ ಸೆಟ್ ಉದ್ಘಾಟಿಸಿ ಮಾತನಾಡಿದರು.</p>.<p>ರೈತರ ಕಲ್ಯಾಣಕ್ಕೆ ಕೇಂದ್ರ ರಾಜ್ಯ ಸರ್ಕಾರ ಹಲವಾರು ಸರಳ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸುತ್ತಿವೆ. ವಿದ್ಯುತ್ ಸಮಸ್ಯೆ ನೀಗಲಿವೆ. ಯೋಜನೆಯಲ್ಲಿ ಮಧ್ಯವರ್ತಿ ಕಾಟವಿಲ್ಲ, ಸಹಾಯಧನದ ಲಾಭವಿದೆ. ಕಂಬ, ತಂತಿ ಮಾರ್ಗ, ಪರಿವರ್ತಕ ಹಾಕುವ ವೆಚ್ಚ ಇಲ್ಲ ಎಂದರು.</p>.<p>ಬೆಸ್ಕಾಂ ಶಾಖಾಧಿಕಾರಿ ಮೇಘರಾಜ್ ಕುಸುಮ್, ಸೂರ್ಯಘರ್ ಯೋಜನೆ ಕುರಿತು ರೈತರಿಗೆ ಅಂಕಿ–ಅಂಶಗಳ ಸಹಿತಿ ಮಾಹಿತಿ ನೀಡಿದರು.</p>.<p>ಬಿಜೆಪಿ ಮುಖಂಡ ಹನಗವಾಡಿ ವೀರೇಶ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್, ಆನಂದಪ್ಪ, ಬಸವನಗೌಡ್ರು, ಬಸವರಾಜಪ್ಪ, ನಾಗರಾಜ್, ಚಂದ್ರಪ್ಪ, ಮಂಜಪ್ಪ,ಸಂತೋಷ್, ರೈತರು ಇದ್ದರು. ಇಂದೂಧರ್ ಎನ್. ರುದ್ರಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> ಕುಸುಮ್ ಯೋಜನೆಯಡಿ ರೈತರ ಜಮೀನುಗಳ ಕೊಳವೆಬಾವಿಯಿಂದ ನೀರೆತ್ತಲು ಸೋಲಾರ್ ಪಂಪ್ಸೆಟ್ ಅಳವಡಿಸುವ ಯೋಜನೆಯ ಲಾಭ ಪಡೆಯುವಂತೆ ಶನಿವಾರ ಶಾಸಕ ಬಿ.ಪಿ. ಹರೀಶ್ ಮನವಿ ಮಾಡಿದರು.</p>.<p>ಸಮೀಪದ ಜಿಗಳಿ ಗ್ರಾಮದ ರೈತ ಜಯಪ್ಪ ನಿರ್ಮಿಸಿದ ಸೋಲಾರ್ ಪಂಪ್ ಸೆಟ್ ಉದ್ಘಾಟಿಸಿ ಮಾತನಾಡಿದರು.</p>.<p>ರೈತರ ಕಲ್ಯಾಣಕ್ಕೆ ಕೇಂದ್ರ ರಾಜ್ಯ ಸರ್ಕಾರ ಹಲವಾರು ಸರಳ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸುತ್ತಿವೆ. ವಿದ್ಯುತ್ ಸಮಸ್ಯೆ ನೀಗಲಿವೆ. ಯೋಜನೆಯಲ್ಲಿ ಮಧ್ಯವರ್ತಿ ಕಾಟವಿಲ್ಲ, ಸಹಾಯಧನದ ಲಾಭವಿದೆ. ಕಂಬ, ತಂತಿ ಮಾರ್ಗ, ಪರಿವರ್ತಕ ಹಾಕುವ ವೆಚ್ಚ ಇಲ್ಲ ಎಂದರು.</p>.<p>ಬೆಸ್ಕಾಂ ಶಾಖಾಧಿಕಾರಿ ಮೇಘರಾಜ್ ಕುಸುಮ್, ಸೂರ್ಯಘರ್ ಯೋಜನೆ ಕುರಿತು ರೈತರಿಗೆ ಅಂಕಿ–ಅಂಶಗಳ ಸಹಿತಿ ಮಾಹಿತಿ ನೀಡಿದರು.</p>.<p>ಬಿಜೆಪಿ ಮುಖಂಡ ಹನಗವಾಡಿ ವೀರೇಶ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್, ಆನಂದಪ್ಪ, ಬಸವನಗೌಡ್ರು, ಬಸವರಾಜಪ್ಪ, ನಾಗರಾಜ್, ಚಂದ್ರಪ್ಪ, ಮಂಜಪ್ಪ,ಸಂತೋಷ್, ರೈತರು ಇದ್ದರು. ಇಂದೂಧರ್ ಎನ್. ರುದ್ರಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>