ಹೊನ್ನಾಳಿ: ‘ಸಚಿವರಲ್ಲಿ ಡಾ.ಸುಧಾಕರ್ ಕೊರೊನಾ ಪೀಡಿತ ವ್ಯಕ್ತಿ. ಅದಕ್ಕಾಗಿಯೇ ರೇಣುಕಾಚಾರ್ಯ ಇಂದು ಅವರ ವಿರುದ್ಧ ಧ್ವನಿಯೆತ್ತಿದ್ದಾರೆ. ಸುಧಾಕರ್ ಯಾರೇ ಫೋನ್ ಮಾಡಿದರೂ ಎತ್ತುವುದೇ ಇಲ್ಲ. ಮೆಸೇಜ್ ಮಾಡಿ ಅಂತಾನೆ. ಮೆಸೇಜ್ ಮಾಡಿದರೆ ಓದೋದೇ ಇಲ್ಲ’ ಎಂದು ಆಯನೂರು ಮಂಜುನಾಥ್ ಟೀಕಿಸಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ 59ನೇ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.