<p><strong>ತ್ಯಾವಣಿಗೆ:</strong> ಸಮೀಪದ ಸೂಳೆಕೆರೆ ಸಿದ್ದೇಶ್ವರಸ್ವಾಮಿಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>.<p>ಮುಂಜಾನೆ ಗಂಗಾಪೂಜೆಯೊಂದಿಗೆ ಸಿದ್ದೇಶ್ವರಸ್ವಾಮಿ ಮತ್ತು ಶಾಂತಮ್ಮ ದೇವಿಗೆ ಅಭಿಷೇಕ, ಪೂಜಾ ಕೈಕಂಕರ್ಯಗಳು ನಡೆದವು.</p>.<p>ವಿವಿಧ ವಾದ್ಯಗಳೊಂದಿಗೆ ಡೊಳ್ಳು ಕುಣಿತದೊಂದಿಗೆ ಸಿದ್ದೇಶ್ವರಸ್ವಾಮಿ, ಬಾತಿ ರೇವಣಸಿದ್ದೇಶ್ವರ ಮತ್ತು ಬೀರಲಿಂಗೇಶ್ವರ ಉತ್ಸವಮೂರ್ತಿಗಳನ್ನು ಮೆರವಣಿಗೆಯಲ್ಲಿ ರಥದ ಸಮೀಪ ಕರೆತರಲಾಯಿತು.</p>.<p>ನಂತರ ರಥದಲ್ಲಿ ಸಿದ್ದೇಶ್ವರಸ್ವಾಮಿ ಹಾಗೂ ಬಾತಿ ರೇವಣಸಿದ್ದೇಶ್ವರಸ್ವಾಮಿ ಉತ್ಸವಮೂರ್ತಿಗಳನ್ನು ಇಟ್ಟು, ರಥದ ನಾಲ್ಕು ಗಾಲಿಗಳಿಗೆ ಬುತ್ತಿ ಉಂಡೆ, ತೆಂಗಿನಕಾಯಿ ಇಟ್ಟು ಪೂಜಿಸಲಾಯಿತು. ನಂತರ ಚನ್ನಗಿರಿ ತಹಶೀಲ್ದಾರ್ ನಾಗರಾಜ್ ಅವರ ಸಮ್ಮುಖದಲ್ಲಿ ತೇರು ಬಾವುಟ, ಹೂವಿನ ಹರಾಜು ಪ್ರಕ್ರಿಯೆ ನಡೆಯಿತು.</p>.<p>ನಂತರ ಭಕ್ತರ ಹರ್ಷೋದ್ಘಾರದೊಂದಿಗೆ ಸಿದ್ದೇಶ್ವರಸ್ವಾಮಿಯ ರಥ ಎಳೆದರು. ಭಕ್ತರು ಮಂಡಕ್ಕಿ, ಮೆಣಸಿನಕಾಳು, ಉತ್ತುತ್ತಿ, ಬಾಳೆಹಣ್ಣು ರಥಕ್ಕೆ ಎರಚಿ ಹರಕೆ ಸಲ್ಲಿಸಿದರು. ಸಿದ್ದೇಶ್ವರಸ್ವಾಮಿಯ ಬಾವುಟ ₹ 1.11 ಲಕ್ಷಕ್ಕೆ ನಲ್ಲೂರು ಹನುಮಂತಪ್ಪ ಶೆಟ್ಟಿ ಹರಾಜು ಪಡೆದರು.</p>.<p>ದೇವಸ್ಥಾನ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಂ. ರೇವಣಸಿದ್ದಪ್ಪ, ಶಶಿಕಲಮೂರ್ತಿ, ಉಮೇಶ್, ನಾಡಿಗರ ಸಿದ್ದೇಶ್, ಅರ್ಚಕರಾದ ಪಿ.ಎಸ್.ಪ್ರಸನ್ನಕುಮಾರ್. ಶಿವಶಂಕರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತ್ಯಾವಣಿಗೆ:</strong> ಸಮೀಪದ ಸೂಳೆಕೆರೆ ಸಿದ್ದೇಶ್ವರಸ್ವಾಮಿಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>.<p>ಮುಂಜಾನೆ ಗಂಗಾಪೂಜೆಯೊಂದಿಗೆ ಸಿದ್ದೇಶ್ವರಸ್ವಾಮಿ ಮತ್ತು ಶಾಂತಮ್ಮ ದೇವಿಗೆ ಅಭಿಷೇಕ, ಪೂಜಾ ಕೈಕಂಕರ್ಯಗಳು ನಡೆದವು.</p>.<p>ವಿವಿಧ ವಾದ್ಯಗಳೊಂದಿಗೆ ಡೊಳ್ಳು ಕುಣಿತದೊಂದಿಗೆ ಸಿದ್ದೇಶ್ವರಸ್ವಾಮಿ, ಬಾತಿ ರೇವಣಸಿದ್ದೇಶ್ವರ ಮತ್ತು ಬೀರಲಿಂಗೇಶ್ವರ ಉತ್ಸವಮೂರ್ತಿಗಳನ್ನು ಮೆರವಣಿಗೆಯಲ್ಲಿ ರಥದ ಸಮೀಪ ಕರೆತರಲಾಯಿತು.</p>.<p>ನಂತರ ರಥದಲ್ಲಿ ಸಿದ್ದೇಶ್ವರಸ್ವಾಮಿ ಹಾಗೂ ಬಾತಿ ರೇವಣಸಿದ್ದೇಶ್ವರಸ್ವಾಮಿ ಉತ್ಸವಮೂರ್ತಿಗಳನ್ನು ಇಟ್ಟು, ರಥದ ನಾಲ್ಕು ಗಾಲಿಗಳಿಗೆ ಬುತ್ತಿ ಉಂಡೆ, ತೆಂಗಿನಕಾಯಿ ಇಟ್ಟು ಪೂಜಿಸಲಾಯಿತು. ನಂತರ ಚನ್ನಗಿರಿ ತಹಶೀಲ್ದಾರ್ ನಾಗರಾಜ್ ಅವರ ಸಮ್ಮುಖದಲ್ಲಿ ತೇರು ಬಾವುಟ, ಹೂವಿನ ಹರಾಜು ಪ್ರಕ್ರಿಯೆ ನಡೆಯಿತು.</p>.<p>ನಂತರ ಭಕ್ತರ ಹರ್ಷೋದ್ಘಾರದೊಂದಿಗೆ ಸಿದ್ದೇಶ್ವರಸ್ವಾಮಿಯ ರಥ ಎಳೆದರು. ಭಕ್ತರು ಮಂಡಕ್ಕಿ, ಮೆಣಸಿನಕಾಳು, ಉತ್ತುತ್ತಿ, ಬಾಳೆಹಣ್ಣು ರಥಕ್ಕೆ ಎರಚಿ ಹರಕೆ ಸಲ್ಲಿಸಿದರು. ಸಿದ್ದೇಶ್ವರಸ್ವಾಮಿಯ ಬಾವುಟ ₹ 1.11 ಲಕ್ಷಕ್ಕೆ ನಲ್ಲೂರು ಹನುಮಂತಪ್ಪ ಶೆಟ್ಟಿ ಹರಾಜು ಪಡೆದರು.</p>.<p>ದೇವಸ್ಥಾನ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಂ. ರೇವಣಸಿದ್ದಪ್ಪ, ಶಶಿಕಲಮೂರ್ತಿ, ಉಮೇಶ್, ನಾಡಿಗರ ಸಿದ್ದೇಶ್, ಅರ್ಚಕರಾದ ಪಿ.ಎಸ್.ಪ್ರಸನ್ನಕುಮಾರ್. ಶಿವಶಂಕರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>