<p><strong>ಮಲೇಬೆನ್ನೂರು: </strong>ಸಮೀಪದ ದೇವರಬೆಳಕೆರೆ ಗ್ರಂಥಾಲಯ ಮತ್ತು ಅರಿವು ಕೇಂದ್ರದಿಂದ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ವಿವಿಧ ಬಗೆಯ ಚಟುವಟಿಕೆ ಕೈಗೊಂಡಿದ್ದು, ಮಕ್ಕಳನ್ನು ಸೆಳೆಯುತ್ತಿದೆ.</p>.<p>15 ದಿನಗಳ ವಿಶೇಷ ತರಬೇತಿ ಆಯೋಜಿಸಿದ್ದು, ಗ್ರಾಮೀಣ ಸೊಗಡಿನ ಜಾನಪದ ಕಲೆ ರಂಗೋಲಿ ಹಾಕುವುದು, ಗೀತ ಗಾಯನ, ಭಜನೆ, ನೃತ್ಯ, ನಾಟಕ ಕಲಿಸಲಾಗುತ್ತಿದೆ.</p>.<p>ಗ್ರಂಥಾಲಯದಲ್ಲಿನ ಪುಸ್ತಕದ ಗಟ್ಟಿ ಓದು, ಕನ್ನಡ, ಇಂಗ್ಲಿಷ್ ಓದು, ಉಕ್ತ ಲೇಖನ, ಗಣಕ ಯಂತ್ರ ತರಬೇತಿ, ಚಿತ್ರ ಬರೆದು ಬಣ್ಣ ಹಾಕುವುದು, ಕಾರ್ಟೂನ್ ವೀಕ್ಷಣೆ, ಮಾಹಿತಿ ನೀಡಲಾಗುತ್ತಿದೆ. ಆಶುಭಾಷಣ, ಪ್ರಬಂಧ ಸ್ಪರ್ಧೆ, ಗುಂಪು ಚರ್ಚೆ ಆಯೋಜಿಸಿ ಮಕ್ಕಳ ಜಾಣತನ ಓರೆಗೆ ಹಚ್ಚಲಾಗುತ್ತಿದೆ.</p>.<p>ಗ್ರಾಮೀಣ ಕ್ರೀಡೆಗಳಾದ ಚೆನ್ನಮಣಿ, ಚುರುಕಿ, ಚೆಸ್, ಕೇರಂ, ಚೆಂಡಿನಾಟ, ಲಗೋರಿ, ಕಣ್ಣಾಮುಚ್ಚಾಲೆ, ಕುಂಟಬಿಲ್ಲೆ, ಚಿನ್ನಿದಾಂಡು, ಸೈಕಲ್ ಓಡಿಸುವ ಆಟ ಕಲಿಸಲಾಗುತ್ತಿದೆ. </p>.<p>‘ದಿನವಿಡಿ ಒಂದಿಲ್ಲೊಂದು ಚಟುವಟಿಕೆ ಮಕ್ಕಳನ್ನು ಒಂದೆಡೆ ಹಿಡಿದಿಟ್ಟಿವೆ. ಅನಗತ್ಯ ಸುತ್ತಾಟ, ನಾಲೆ, ಬಾವಿಗಳಿಗೆ ಈಜಾಡಲು ಹೋಗುವುದನ್ನು ತಪ್ಪಿಸಿವೆ’ ಎಂದು ಪಾಲಕರಾದ ರಾಜಪ್ಪ, ಶಶಿಕಲಾ ಸಂತಸದಿಂದ ಹೇಳಿದರು.</p>.<p>ಮಕ್ಕಳು ಚಿಕ್ಕಪುಟ್ಟ ಪೆಟ್ಟು, ಬಿದ್ದು ಗಾಯಗೊಳ್ಳುವುದು, ಕೈಜಕಾಲು ಮುರಿದುಕೊಳ್ಳುವುದು ಈ ಬಾರಿ ತಪ್ಪಿಸಿದೆ ಎಂದರು.</p>.<p>ನಗರ ಪ್ರದೇಶದ ಮಕ್ಕಳಿಗೆ ಸಿಗುವ ಸೌಲಭ್ಯ ಗ್ರಾಮೀಣ ಪ್ರದೇಶದಲ್ಲಿ ಇಲ್ಲ. ಅದು ಸಿಗಲಿ ಎಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಮಕ್ಕಳೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ ಎಂದು ಗ್ರಂಥಪಾಲಕ ಗಣೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಸಮೀಪದ ದೇವರಬೆಳಕೆರೆ ಗ್ರಂಥಾಲಯ ಮತ್ತು ಅರಿವು ಕೇಂದ್ರದಿಂದ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ವಿವಿಧ ಬಗೆಯ ಚಟುವಟಿಕೆ ಕೈಗೊಂಡಿದ್ದು, ಮಕ್ಕಳನ್ನು ಸೆಳೆಯುತ್ತಿದೆ.</p>.<p>15 ದಿನಗಳ ವಿಶೇಷ ತರಬೇತಿ ಆಯೋಜಿಸಿದ್ದು, ಗ್ರಾಮೀಣ ಸೊಗಡಿನ ಜಾನಪದ ಕಲೆ ರಂಗೋಲಿ ಹಾಕುವುದು, ಗೀತ ಗಾಯನ, ಭಜನೆ, ನೃತ್ಯ, ನಾಟಕ ಕಲಿಸಲಾಗುತ್ತಿದೆ.</p>.<p>ಗ್ರಂಥಾಲಯದಲ್ಲಿನ ಪುಸ್ತಕದ ಗಟ್ಟಿ ಓದು, ಕನ್ನಡ, ಇಂಗ್ಲಿಷ್ ಓದು, ಉಕ್ತ ಲೇಖನ, ಗಣಕ ಯಂತ್ರ ತರಬೇತಿ, ಚಿತ್ರ ಬರೆದು ಬಣ್ಣ ಹಾಕುವುದು, ಕಾರ್ಟೂನ್ ವೀಕ್ಷಣೆ, ಮಾಹಿತಿ ನೀಡಲಾಗುತ್ತಿದೆ. ಆಶುಭಾಷಣ, ಪ್ರಬಂಧ ಸ್ಪರ್ಧೆ, ಗುಂಪು ಚರ್ಚೆ ಆಯೋಜಿಸಿ ಮಕ್ಕಳ ಜಾಣತನ ಓರೆಗೆ ಹಚ್ಚಲಾಗುತ್ತಿದೆ.</p>.<p>ಗ್ರಾಮೀಣ ಕ್ರೀಡೆಗಳಾದ ಚೆನ್ನಮಣಿ, ಚುರುಕಿ, ಚೆಸ್, ಕೇರಂ, ಚೆಂಡಿನಾಟ, ಲಗೋರಿ, ಕಣ್ಣಾಮುಚ್ಚಾಲೆ, ಕುಂಟಬಿಲ್ಲೆ, ಚಿನ್ನಿದಾಂಡು, ಸೈಕಲ್ ಓಡಿಸುವ ಆಟ ಕಲಿಸಲಾಗುತ್ತಿದೆ. </p>.<p>‘ದಿನವಿಡಿ ಒಂದಿಲ್ಲೊಂದು ಚಟುವಟಿಕೆ ಮಕ್ಕಳನ್ನು ಒಂದೆಡೆ ಹಿಡಿದಿಟ್ಟಿವೆ. ಅನಗತ್ಯ ಸುತ್ತಾಟ, ನಾಲೆ, ಬಾವಿಗಳಿಗೆ ಈಜಾಡಲು ಹೋಗುವುದನ್ನು ತಪ್ಪಿಸಿವೆ’ ಎಂದು ಪಾಲಕರಾದ ರಾಜಪ್ಪ, ಶಶಿಕಲಾ ಸಂತಸದಿಂದ ಹೇಳಿದರು.</p>.<p>ಮಕ್ಕಳು ಚಿಕ್ಕಪುಟ್ಟ ಪೆಟ್ಟು, ಬಿದ್ದು ಗಾಯಗೊಳ್ಳುವುದು, ಕೈಜಕಾಲು ಮುರಿದುಕೊಳ್ಳುವುದು ಈ ಬಾರಿ ತಪ್ಪಿಸಿದೆ ಎಂದರು.</p>.<p>ನಗರ ಪ್ರದೇಶದ ಮಕ್ಕಳಿಗೆ ಸಿಗುವ ಸೌಲಭ್ಯ ಗ್ರಾಮೀಣ ಪ್ರದೇಶದಲ್ಲಿ ಇಲ್ಲ. ಅದು ಸಿಗಲಿ ಎಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಮಕ್ಕಳೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ ಎಂದು ಗ್ರಂಥಪಾಲಕ ಗಣೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>