ದಾವಣಗೆರೆ ದೇವರಾಜ ಅರಸು ಬಡಾವಣೆ ನಿವಾಸಿ ಎಚ್.ಬಿ. ಸುನಿಲ್ಕುಮಾರ್ (32) ಕಣ್ಮರೆಯಾದವರು. ಇವರು ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಮಗಳ ಹುಟ್ಟುಹಬ್ಬ ಆಚರಿಸಲು ಗುತ್ತೂರು ಕಾಲೊನಿಯ ಪತ್ನಿಯ ಮನೆಗೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಸ್ನಾನಕ್ಕೆಂದು ಹೊಳೆಯಲ್ಲಿ ಇಳಿದಾಗ ಈಜು ಬಾರದೇ ಮುಳುಗಿದ್ದಾರೆ. ಶವ ಪತ್ತೆಯಾಗಿಲ್ಲ. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.