‘ಈ ಬ್ಯಾಕ್ಟೀರಿಯಾ ವಾಂತಿ–ಭೇದಿಗೆ ಕಾರಣವಾಗಬಲ್ಲದು. ಕ್ಲೋರಿನೇಷನ್ ಆಗಿದ್ದರಿಂದ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಚಿತ್ರದುರ್ಗ ಘಟನೆಗೆ ಶಾಂತಿಸಾಗರದ ನೀರಲ್ಲಿ ಕಂಡು ಬಂದ ಸೂಕ್ಷ್ಮಾಣು ಕಾರಣವಲ್ಲ. ಕವಾಡಿಗರಹಟ್ಟಿಯಲ್ಲಿ ಪೂರೈಕೆಯಾದ ನೀರಿನ ಮಾದರಿಯಲ್ಲಿ ಪತ್ತೆಯಾದ ಸೂಕ್ಷ್ಮಾಣು ಇಲ್ಲಿ ಪತ್ತೆಯಾಗಿಲ್ಲ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.