<p><strong>ದಾವಣಗೆರೆ:</strong> ದುಗ್ಗಮ್ಮನ ಜಾತ್ರೆಯ ಪಟ್ಟಿ ಎಂದು ಹೇಳಿಕೊಂಡು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಹೆಸರಲ್ಲಿ ಚಂದಾ ರಶೀದಿ ಪುಸ್ತಕವನ್ನು ಪ್ರಿಂಟ್ ಮಾಡಿಕೊಂಡು ಅಕ್ಕಿ, ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಆರ್ಎಂಸಿ ಪೊಲೀಸರು ಬಂಧಿಸಿದ್ದಾರೆ. ₹ 4,100 ನಗದು, ಒಂದು ರಶೀದಿ ಪುಸ್ತಕ, ಒಂದು ಆಟೊ ವಶಪಡಿಸಿಕೊಂಡಿದ್ದಾರೆ.</p>.<p>ಶಾಮನೂರು ಗ್ರಾಮದ ಗಿರೀಶ್ (33), ನಿಟುವಳ್ಳಿ ಮೌನೇಶ್ವರ ಬಡಾವಣೆಯ ಅಜಯ್ ಕುಮಾರ್ (33), ಶಾಮನೂರು ನಿಂಗರಾಜ್ (36) ಬಂಧಿತರು. ಅಂಜಿನಿ ಎಂಬಾತ ತಪ್ಪಿಸಿಕೊಂಡಿದ್ದಾನೆ. ಈ ಆರೋಪಿಗಳು ಬುಧವಾರ ಬಂಬೂ ಬಜಾರ್ ಬಾಲಾಜಿ ಪೆಟ್ರೋಲ್ ಬಂಕ್, ವಾಸು ಆಗ್ರೋ ಏಜೆನ್ಸಿ, ವಾಣಿ ಹೋಂಡಾ ಶೋರೂಂ, ಪ್ರಕಾಶ್ ಶೋರೂಂ, ಶ್ರೀಕೃಷ್ಣ ಏಜೆನ್ಸಿ ಮುಂತಾದ ಅಂಗಡಿಗಳಿಂದ ಅಕ್ಕಿ, ಹಣವನ್ನು ಬಲವಂತವಾಗಿ ವಸೂಲಿ ಮಾಡಿದ್ದರು. ಬಾಲಾಜಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಚಂದ್ರಶೇಖರ್ ಈ ಬಗ್ಗೆ ದೂರು ನೀಡಿದ್ದರು.</p>.<p>ಸರ್ಕಲ್ ಇನ್ಸ್ಪೆಕ್ಟರ್ ಗಜೇಂದ್ರಪ್ಪ ಕೆ.ಎನ್. ನೇತೃತ್ವದಲ್ಲಿ ಆರ್ಎಂಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ದುಗ್ಗಮ್ಮನ ಜಾತ್ರೆಯ ಪಟ್ಟಿ ಎಂದು ಹೇಳಿಕೊಂಡು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಹೆಸರಲ್ಲಿ ಚಂದಾ ರಶೀದಿ ಪುಸ್ತಕವನ್ನು ಪ್ರಿಂಟ್ ಮಾಡಿಕೊಂಡು ಅಕ್ಕಿ, ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಆರ್ಎಂಸಿ ಪೊಲೀಸರು ಬಂಧಿಸಿದ್ದಾರೆ. ₹ 4,100 ನಗದು, ಒಂದು ರಶೀದಿ ಪುಸ್ತಕ, ಒಂದು ಆಟೊ ವಶಪಡಿಸಿಕೊಂಡಿದ್ದಾರೆ.</p>.<p>ಶಾಮನೂರು ಗ್ರಾಮದ ಗಿರೀಶ್ (33), ನಿಟುವಳ್ಳಿ ಮೌನೇಶ್ವರ ಬಡಾವಣೆಯ ಅಜಯ್ ಕುಮಾರ್ (33), ಶಾಮನೂರು ನಿಂಗರಾಜ್ (36) ಬಂಧಿತರು. ಅಂಜಿನಿ ಎಂಬಾತ ತಪ್ಪಿಸಿಕೊಂಡಿದ್ದಾನೆ. ಈ ಆರೋಪಿಗಳು ಬುಧವಾರ ಬಂಬೂ ಬಜಾರ್ ಬಾಲಾಜಿ ಪೆಟ್ರೋಲ್ ಬಂಕ್, ವಾಸು ಆಗ್ರೋ ಏಜೆನ್ಸಿ, ವಾಣಿ ಹೋಂಡಾ ಶೋರೂಂ, ಪ್ರಕಾಶ್ ಶೋರೂಂ, ಶ್ರೀಕೃಷ್ಣ ಏಜೆನ್ಸಿ ಮುಂತಾದ ಅಂಗಡಿಗಳಿಂದ ಅಕ್ಕಿ, ಹಣವನ್ನು ಬಲವಂತವಾಗಿ ವಸೂಲಿ ಮಾಡಿದ್ದರು. ಬಾಲಾಜಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಚಂದ್ರಶೇಖರ್ ಈ ಬಗ್ಗೆ ದೂರು ನೀಡಿದ್ದರು.</p>.<p>ಸರ್ಕಲ್ ಇನ್ಸ್ಪೆಕ್ಟರ್ ಗಜೇಂದ್ರಪ್ಪ ಕೆ.ಎನ್. ನೇತೃತ್ವದಲ್ಲಿ ಆರ್ಎಂಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>