ಶಾಮನೂರು ಗ್ರಾಮದ ಗಿರೀಶ್ (33), ನಿಟುವಳ್ಳಿ ಮೌನೇಶ್ವರ ಬಡಾವಣೆಯ ಅಜಯ್ ಕುಮಾರ್ (33), ಶಾಮನೂರು ನಿಂಗರಾಜ್ (36) ಬಂಧಿತರು. ಅಂಜಿನಿ ಎಂಬಾತ ತಪ್ಪಿಸಿಕೊಂಡಿದ್ದಾನೆ. ಈ ಆರೋಪಿಗಳು ಬುಧವಾರ ಬಂಬೂ ಬಜಾರ್ ಬಾಲಾಜಿ ಪೆಟ್ರೋಲ್ ಬಂಕ್, ವಾಸು ಆಗ್ರೋ ಏಜೆನ್ಸಿ, ವಾಣಿ ಹೋಂಡಾ ಶೋರೂಂ, ಪ್ರಕಾಶ್ ಶೋರೂಂ, ಶ್ರೀಕೃಷ್ಣ ಏಜೆನ್ಸಿ ಮುಂತಾದ ಅಂಗಡಿಗಳಿಂದ ಅಕ್ಕಿ, ಹಣವನ್ನು ಬಲವಂತವಾಗಿ ವಸೂಲಿ ಮಾಡಿದ್ದರು. ಬಾಲಾಜಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಚಂದ್ರಶೇಖರ್ ಈ ಬಗ್ಗೆ ದೂರು ನೀಡಿದ್ದರು.