ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಗ್ಗಮ್ಮನ ಜಾತ್ರೆ ಹೆಸರಲ್ಲಿ ವಸೂಲಿ: ಮೂವರು ಪೊಲೀಸ್‌ ವಶಕ್ಕೆ

Last Updated 13 ಫೆಬ್ರುವರಿ 2020, 15:39 IST
ಅಕ್ಷರ ಗಾತ್ರ

ದಾವಣಗೆರೆ: ದುಗ್ಗಮ್ಮನ ಜಾತ್ರೆಯ ಪಟ್ಟಿ ಎಂದು ಹೇಳಿಕೊಂಡು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ಹೆಸರಲ್ಲಿ ಚಂದಾ ರಶೀದಿ ಪುಸ್ತಕವನ್ನು ಪ್ರಿಂಟ್‌ ಮಾಡಿಕೊಂಡು ಅಕ್ಕಿ, ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಆರ್‌ಎಂಸಿ ಪೊಲೀಸರು ಬಂಧಿಸಿದ್ದಾರೆ. ₹ 4,100 ನಗದು, ಒಂದು ರಶೀದಿ ಪುಸ್ತಕ, ಒಂದು ಆಟೊ ವಶಪಡಿಸಿಕೊಂಡಿದ್ದಾರೆ.

ಶಾಮನೂರು ಗ್ರಾಮದ ಗಿರೀಶ್‌ (33), ನಿಟುವಳ್ಳಿ ಮೌನೇಶ್ವರ ಬಡಾವಣೆಯ ಅಜಯ್‌ ಕುಮಾರ್‌ (33), ಶಾಮನೂರು ನಿಂಗರಾಜ್‌ (36) ಬಂಧಿತರು. ಅಂಜಿನಿ ಎಂಬಾತ ತಪ್ಪಿಸಿಕೊಂಡಿದ್ದಾನೆ. ಈ ಆರೋಪಿಗಳು ಬುಧವಾರ ಬಂಬೂ ಬಜಾರ್‌ ಬಾಲಾಜಿ ಪೆಟ್ರೋಲ್‌ ಬಂಕ್‌, ವಾಸು ಆಗ್ರೋ ಏಜೆನ್ಸಿ, ವಾಣಿ ಹೋಂಡಾ ಶೋರೂಂ, ಪ್ರಕಾಶ್‌ ಶೋರೂಂ, ಶ್ರೀಕೃಷ್ಣ ಏಜೆನ್ಸಿ ಮುಂತಾದ ಅಂಗಡಿಗಳಿಂದ ಅಕ್ಕಿ, ಹಣವನ್ನು ಬಲವಂತವಾಗಿ ವಸೂಲಿ ಮಾಡಿದ್ದರು. ಬಾಲಾಜಿ ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ ಚಂದ್ರಶೇಖರ್‌ ಈ ಬಗ್ಗೆ ದೂರು ನೀಡಿದ್ದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಗಜೇಂದ್ರಪ್ಪ ಕೆ.ಎನ್‌. ನೇತೃತ್ವದಲ್ಲಿ ಆರ್‌ಎಂಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT