ಈ ಮೂರು ಜನ ಯುವಕರನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಹೇಳತೀರದು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಬಸವರಾಜ್ ಅವರಿಗೆ ಈಗ ಮಗಳೇ ಆಧಾರ. ದಿವಂಗತ ಶಿವಾಜಿ ಅವರ ಕುಟುಂಬದಲ್ಲಿ ಅವರ ಹಿರಿಯ ಮಗ ಅರುಣ್ ಒಬ್ಬಂಟಿಯಾಗಿದ್ದಾರೆ. ಈರಪ್ಪ ಅವರಿಗೆ ಮೂವರು ಪುತ್ರಿಯರು ಇದ್ದು ಅವರ ವಿವಾಹವಾಗಿದ್ದು, ಎಲ್ಲರೂ ಗಂಡನ ಮನೆಯಲ್ಲಿದ್ದಾರೆ. ಕುಟುಂಬಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.