<p><strong>ದಾವಣಗೆರೆ:</strong>ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂಗೆ ಎರಡನೇ ದಿನ ಭಾನುವಾರ ಸಾರ್ವಜನಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಯಿತು.</p>.<p>ಭಾನುವಾರ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ರಜೆ ಇದ್ದುದ್ದರಿಂದ ನಗರದ ಜನ ಮನೆಯಲ್ಲಿಯೇ ಕಾಲ ಕಳೆದರು. ಆಸ್ಪತ್ರೆಗೆ ಮತ್ತು ಔಷಧ ಖರೀದಿಸಲು ಬಂದವರು ಮಾತ್ರ ಅಲ್ಲಲ್ಲಿ ಕಂಡುಬಂದರು. ಬಸ್ ನಿಲ್ದಾಣಗಳಲ್ಲೂ ಹೆಚ್ಚಿನ ಜನರು ಕಂಡುಬರಲಿಲ್ಲ.</p>.<p>ನಗರದ ಎಲ್ಲಾ ರಸ್ತೆಗಳು ಖಾಲಿಯಾಗಿದ್ದವು. ಜಯದೇವ ವೃತ್ತ, ಅಂಬೇಡ್ಕರ್ ಸರ್ಕಲ್, ಪಿ.ಬಿ. ರಸ್ತೆ, ಗಾಂಧಿ ಸರ್ಕಲ್, ಎಪಿಎಂಸಿ, ಗುಂಡಿ ಸರ್ಕಲ್, ಹಳೇ ದಾವಣಗೆರೆಯ ಬಹುತೇಕ ವೃತ್ತಗಳು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದರು.</p>.<p class="Subhead">ಖರೀದಿಗೆ ಮುಗಿಬಿದ್ದ ಜನ: ಲಾಕ್ಡೌನ್ ಮಂದುವರಿಯುತ್ತದೆ ಎಂಬ ವದಂತಿ<br />ಯಿಂದಾಗಿ ಬೆಳಿಗ್ಗೆ 6ರಿಂದ 10ರವರೆಗೆ ಖರೀದಿ ಜೋರಾಗಿತ್ತು. ನಗರದ ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ, ಎಪಿಎಂಸಿ, ನಿಜಲಿಂಗಪ್ಪ ಬಡಾವಣೆಯ ಸರ್ಕಲ್ಗಳಲ್ಲಿ ತರಕಾರಿ<br />ಕೊಂಡುಕೊಳ್ಳಲು ಮುಗಿಬಿದ್ದಿದ್ದರು.<br />ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಧರಿಸದೇ ವಹಿವಾಟಿನಲ್ಲಿ ತೊಡಗಿದ್ದರು. ಕಿರಾಣಿ ಅಂಗಡಿಗಳಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು.</p>.<p class="Subhead">ಅಂಗಡಿ ಬಂದ್ ಮಾಡಿಸಿದ ತಹಶೀಲ್ದಾರ್: ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10ರ ವರೆಗೆ ಅವಕಾಶ ಕಲ್ಪಿಸಿದ್ದರೂ ಕೆಲವರು ಕೆ.ಆರ್. ಮಾರುಕಟ್ಟೆ ಬಳಿ ಅಂಗಡಿ ಮುಚ್ಚಲು ವಿಳಂಬ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಗಿರೀಶ್ ಹಾಗೂ ಪೊಲೀಸರು ಅಂಗಡಿಗಳನ್ನು ಮುಚ್ಚಿ<br />ಸಿದರು. ಮಾಸ್ಕ್ ಧರಿಸದಿದ್ದವರನ್ನು ತರಾಟೆಗೆ ತೆಗೆದುಕೊಂಡರು.</p>.<p class="Subhead">ನಿಷೇಧವಿದ್ದರೂ ಮಾಂಸ ಮಾರಾಟ: ಮಹಾವೀರ ಜಯಂತಿ ಪ್ರಯುಕ್ತ ಮಾಂಸ ಮಾರಾಟ ನಿಷೇಧವಿದ್ದರೂ ಕೆಲವೆಡೆ ಕದ್ದುಮುಚ್ಚಿ ಮಾಂಸ ಮಾರಾಟ ಮಾಡುತ್ತಿದ್ದುದು ಕಂಡುಬಂತು. ವಿನೋಬನಗರ ಹಾಗೂ ನಿಟುವಳ್ಳಿಯ ನಿಂಚನಾ ಶಾಲೆ ಬಳಿಯ ಕೆಲವು ಚಿಕನ್ ಸೆಂಟರ್ಗಳು ಮತ್ತು ರೈಲ್ವೆ ಹಳಿಯ ಬಳಿ ಇರುವ ಮೀನು ಮಾರುಕಟ್ಟೆಗಳಲ್ಲಿ ಮಾರಾಟ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಂಗಡಿ<br />ಗಳನ್ನು ಮುಚ್ಚಿಸಿ, ಮಾಲೀಕರಿಗೆ ಎಚ್ಚರಿಕೆ ನೀಡಿದರು.</p>.<p>ಭಾನುವಾರವಾದ್ದರಿಂದ ಜನರು ಮಾಂಸ ಖರೀದಿಗೆ ಮುಗಿಬಿದ್ದಿದ್ದು, ಹೆಚ್ಚಿನ ಹಣ ಕೊಟ್ಟು ಮಾಂಸ ಖರೀದಿ<br />ಸಿದರು. ಮಾಂಸ ಮಾರಾಟ ಮಾಡದಂತೆ ಮಹಾನಗರಪಾಲಿಕೆ ಕೆಲ ದಿನಗಳ ಹಿಂದೆ ಪ್ರಕಟಣೆ ಹೊರಡಿಸಿದ್ದರೂ ಆದೇಶ ಉಲ್ಲಂಘಿಸಿ ಮಾರಾಟ ಮಾಡಿದರು.</p>.<p class="Subhead">ಮದುವೆ: ₹ 30 ಸಾವಿರಕ್ಕೂ ಹೆಚ್ಚು ದಂಡ</p>.<p>ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಸಂಬಂಧ ನಗರದ ಹಲವು ಕಲ್ಯಾಣ ಮಂಟಪಗಳಲ್ಲಿ ವಧು–ವರರ ತಂದೆ ತಾಯಂದಿರಿಗೆ ದಂಡ ವಿಧಿಸಲಾಗಿದೆ.</p>.<p>ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು ಭಾನುವಾರ ಸಾಯಂಕಾಲ ವಿವಿಧ ಕಲ್ಯಾಣ ಮಂಟಪಗಳಿಗೆ ತೆರಳಿ ಮಾಸ್ಕ್ ಧರಿಸದವರಿಗೆ ₹7,000 ದಂಡ ವಿಧಿಸಿದರು. ಮಹಾನಗರ ಪಾಲಿಕೆ ಅಧಿಕಾರಿಗಳು ಮೂರು ತಂಡಗಳಲ್ಲಿ ಸಂಚರಿಸಿ ₹ 30 ಸಾವಿರಕ್ಕೂ ಹೆಚ್ಚು ದಂಡ ವಿಧಿಸಿದ್ದಾರೆ. ನಿಗದಿಗಿಂತ ಹೆಚ್ಚು ಜನ ಸೇರಿರುವುದು, ಅಂತರ ಕಾಯ್ದುಕೊಳ್ಳದಿರುವುದಕ್ಕೆ ದಂಡ ವಿಧಿಸಲಾಗಿದೆ.</p>.<p>‘ಭಾನುವಾರ ನಗರದಲ್ಲಿ 26 ಮದುವೆಗಳು ನಿಶ್ಚಯವಾಗಿದ್ದು, ಕೋವಿಡ್ ಕಾರಣದಿಂದಾಗಿ ದಂಡ ವಿಧಿಸುತ್ತಾರೆ ಎಂಬ ಭಯದಿಂದಲೇ ಹಲವು ಮದುವೆಗಳು ರದ್ದಾಗಿವೆ’ ಎಂದು ತಹಶೀಲ್ದಾರ್ ಗಿರೀಶ್ ತಿಳಿಸಿದರು.</p>.<p class="Subhead">ಮಾಸ್ಕ್ ಧರಿಸದವರಿಗೆ ₹49 ಸಾವಿರ ದಂಡ</p>.<p>ಜಿಲ್ಲೆಯಲ್ಲಿ ಭಾನುವಾರ ಮಾಸ್ಕ್ ಧರಿಸದ 346 ಪ್ರಕರಣಗಳನ್ನು ದಾಖಲಿಸಿ ₹ 49,300 ದಂಡವನ್ನು ವಿಧಿಸಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.</p>.<p>ಚನ್ನಗಿರಿ ತಾಲ್ಲೂಕು ಹೆಬ್ಬಳಗೆರೆ ಗ್ರಾಮದ ಮಾರಿಕಾಂಬ ದೇವಾಲಯದ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong>ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂಗೆ ಎರಡನೇ ದಿನ ಭಾನುವಾರ ಸಾರ್ವಜನಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಯಿತು.</p>.<p>ಭಾನುವಾರ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ರಜೆ ಇದ್ದುದ್ದರಿಂದ ನಗರದ ಜನ ಮನೆಯಲ್ಲಿಯೇ ಕಾಲ ಕಳೆದರು. ಆಸ್ಪತ್ರೆಗೆ ಮತ್ತು ಔಷಧ ಖರೀದಿಸಲು ಬಂದವರು ಮಾತ್ರ ಅಲ್ಲಲ್ಲಿ ಕಂಡುಬಂದರು. ಬಸ್ ನಿಲ್ದಾಣಗಳಲ್ಲೂ ಹೆಚ್ಚಿನ ಜನರು ಕಂಡುಬರಲಿಲ್ಲ.</p>.<p>ನಗರದ ಎಲ್ಲಾ ರಸ್ತೆಗಳು ಖಾಲಿಯಾಗಿದ್ದವು. ಜಯದೇವ ವೃತ್ತ, ಅಂಬೇಡ್ಕರ್ ಸರ್ಕಲ್, ಪಿ.ಬಿ. ರಸ್ತೆ, ಗಾಂಧಿ ಸರ್ಕಲ್, ಎಪಿಎಂಸಿ, ಗುಂಡಿ ಸರ್ಕಲ್, ಹಳೇ ದಾವಣಗೆರೆಯ ಬಹುತೇಕ ವೃತ್ತಗಳು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದರು.</p>.<p class="Subhead">ಖರೀದಿಗೆ ಮುಗಿಬಿದ್ದ ಜನ: ಲಾಕ್ಡೌನ್ ಮಂದುವರಿಯುತ್ತದೆ ಎಂಬ ವದಂತಿ<br />ಯಿಂದಾಗಿ ಬೆಳಿಗ್ಗೆ 6ರಿಂದ 10ರವರೆಗೆ ಖರೀದಿ ಜೋರಾಗಿತ್ತು. ನಗರದ ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ, ಎಪಿಎಂಸಿ, ನಿಜಲಿಂಗಪ್ಪ ಬಡಾವಣೆಯ ಸರ್ಕಲ್ಗಳಲ್ಲಿ ತರಕಾರಿ<br />ಕೊಂಡುಕೊಳ್ಳಲು ಮುಗಿಬಿದ್ದಿದ್ದರು.<br />ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಧರಿಸದೇ ವಹಿವಾಟಿನಲ್ಲಿ ತೊಡಗಿದ್ದರು. ಕಿರಾಣಿ ಅಂಗಡಿಗಳಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು.</p>.<p class="Subhead">ಅಂಗಡಿ ಬಂದ್ ಮಾಡಿಸಿದ ತಹಶೀಲ್ದಾರ್: ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10ರ ವರೆಗೆ ಅವಕಾಶ ಕಲ್ಪಿಸಿದ್ದರೂ ಕೆಲವರು ಕೆ.ಆರ್. ಮಾರುಕಟ್ಟೆ ಬಳಿ ಅಂಗಡಿ ಮುಚ್ಚಲು ವಿಳಂಬ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಗಿರೀಶ್ ಹಾಗೂ ಪೊಲೀಸರು ಅಂಗಡಿಗಳನ್ನು ಮುಚ್ಚಿ<br />ಸಿದರು. ಮಾಸ್ಕ್ ಧರಿಸದಿದ್ದವರನ್ನು ತರಾಟೆಗೆ ತೆಗೆದುಕೊಂಡರು.</p>.<p class="Subhead">ನಿಷೇಧವಿದ್ದರೂ ಮಾಂಸ ಮಾರಾಟ: ಮಹಾವೀರ ಜಯಂತಿ ಪ್ರಯುಕ್ತ ಮಾಂಸ ಮಾರಾಟ ನಿಷೇಧವಿದ್ದರೂ ಕೆಲವೆಡೆ ಕದ್ದುಮುಚ್ಚಿ ಮಾಂಸ ಮಾರಾಟ ಮಾಡುತ್ತಿದ್ದುದು ಕಂಡುಬಂತು. ವಿನೋಬನಗರ ಹಾಗೂ ನಿಟುವಳ್ಳಿಯ ನಿಂಚನಾ ಶಾಲೆ ಬಳಿಯ ಕೆಲವು ಚಿಕನ್ ಸೆಂಟರ್ಗಳು ಮತ್ತು ರೈಲ್ವೆ ಹಳಿಯ ಬಳಿ ಇರುವ ಮೀನು ಮಾರುಕಟ್ಟೆಗಳಲ್ಲಿ ಮಾರಾಟ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಂಗಡಿ<br />ಗಳನ್ನು ಮುಚ್ಚಿಸಿ, ಮಾಲೀಕರಿಗೆ ಎಚ್ಚರಿಕೆ ನೀಡಿದರು.</p>.<p>ಭಾನುವಾರವಾದ್ದರಿಂದ ಜನರು ಮಾಂಸ ಖರೀದಿಗೆ ಮುಗಿಬಿದ್ದಿದ್ದು, ಹೆಚ್ಚಿನ ಹಣ ಕೊಟ್ಟು ಮಾಂಸ ಖರೀದಿ<br />ಸಿದರು. ಮಾಂಸ ಮಾರಾಟ ಮಾಡದಂತೆ ಮಹಾನಗರಪಾಲಿಕೆ ಕೆಲ ದಿನಗಳ ಹಿಂದೆ ಪ್ರಕಟಣೆ ಹೊರಡಿಸಿದ್ದರೂ ಆದೇಶ ಉಲ್ಲಂಘಿಸಿ ಮಾರಾಟ ಮಾಡಿದರು.</p>.<p class="Subhead">ಮದುವೆ: ₹ 30 ಸಾವಿರಕ್ಕೂ ಹೆಚ್ಚು ದಂಡ</p>.<p>ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಸಂಬಂಧ ನಗರದ ಹಲವು ಕಲ್ಯಾಣ ಮಂಟಪಗಳಲ್ಲಿ ವಧು–ವರರ ತಂದೆ ತಾಯಂದಿರಿಗೆ ದಂಡ ವಿಧಿಸಲಾಗಿದೆ.</p>.<p>ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು ಭಾನುವಾರ ಸಾಯಂಕಾಲ ವಿವಿಧ ಕಲ್ಯಾಣ ಮಂಟಪಗಳಿಗೆ ತೆರಳಿ ಮಾಸ್ಕ್ ಧರಿಸದವರಿಗೆ ₹7,000 ದಂಡ ವಿಧಿಸಿದರು. ಮಹಾನಗರ ಪಾಲಿಕೆ ಅಧಿಕಾರಿಗಳು ಮೂರು ತಂಡಗಳಲ್ಲಿ ಸಂಚರಿಸಿ ₹ 30 ಸಾವಿರಕ್ಕೂ ಹೆಚ್ಚು ದಂಡ ವಿಧಿಸಿದ್ದಾರೆ. ನಿಗದಿಗಿಂತ ಹೆಚ್ಚು ಜನ ಸೇರಿರುವುದು, ಅಂತರ ಕಾಯ್ದುಕೊಳ್ಳದಿರುವುದಕ್ಕೆ ದಂಡ ವಿಧಿಸಲಾಗಿದೆ.</p>.<p>‘ಭಾನುವಾರ ನಗರದಲ್ಲಿ 26 ಮದುವೆಗಳು ನಿಶ್ಚಯವಾಗಿದ್ದು, ಕೋವಿಡ್ ಕಾರಣದಿಂದಾಗಿ ದಂಡ ವಿಧಿಸುತ್ತಾರೆ ಎಂಬ ಭಯದಿಂದಲೇ ಹಲವು ಮದುವೆಗಳು ರದ್ದಾಗಿವೆ’ ಎಂದು ತಹಶೀಲ್ದಾರ್ ಗಿರೀಶ್ ತಿಳಿಸಿದರು.</p>.<p class="Subhead">ಮಾಸ್ಕ್ ಧರಿಸದವರಿಗೆ ₹49 ಸಾವಿರ ದಂಡ</p>.<p>ಜಿಲ್ಲೆಯಲ್ಲಿ ಭಾನುವಾರ ಮಾಸ್ಕ್ ಧರಿಸದ 346 ಪ್ರಕರಣಗಳನ್ನು ದಾಖಲಿಸಿ ₹ 49,300 ದಂಡವನ್ನು ವಿಧಿಸಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.</p>.<p>ಚನ್ನಗಿರಿ ತಾಲ್ಲೂಕು ಹೆಬ್ಬಳಗೆರೆ ಗ್ರಾಮದ ಮಾರಿಕಾಂಬ ದೇವಾಲಯದ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>