ಇಲ್ಲಿನ ಸರಸ್ವತಿ ಬಡಾವಣೆ ನಿವಾಸಿ, ನಿವೃತ್ತ ಎಂಜಿನಿಯರ್ ಎಂ.ಎಸ್. ಬಸಪ್ಪ ಅವರ ಮಗಳು ಶರ್ಮಿಳಾ ಅವರನ್ನು ಹುಬ್ಬಳ್ಳಿ ಮಹಿಳಾ ಠಾಣೆಯ ಪಿಎಸ್ಐ ಲೀಲಾವತಿ ಅವರ ಮಗ ನವೀನ್ ಕುಮಾರ್ಗೆ 2014ರಲ್ಲಿ ಮದುವೆ ಮಾಡಿ ಕೊಡಲಾಗಿತ್ತು. ಆಗ ವರದಕ್ಷಿಣೆಯಾಗಿ ₹ 10 ಲಕ್ಷ ನಗದು, 10 ತೊಲ ಬಂಗಾರ, 2 ಕೆ.ಜಿ. ಬೆಳ್ಳಿ ನೀಡಲಾಗಿತ್ತು. ಮದುವೆಯ ಬಳಿಕ ಮತ್ತಷ್ಟು ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 2015ರ ಸೆಪ್ಟೆಂಬರ್ನಲ್ಲಿ ಮನೆಯಿಂದ ಹೊರ ಹಾಕಿದ್ದರು. ಇದರಿಂದ ಮನನೊಂದು ಶರ್ಮಿಳಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಎಂ.ಎಸ್. ಬಸಪ್ಪ ಅವರ ದೂರಿನಂತೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.