<p><strong>ಜಗಳೂರು: </strong>ತಾಲ್ಲೂಕಿನಲ್ಲಿ `ಬರ~ ಪರಿಸ್ಥಿತಿಯ ನಡುವೆಯೂ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. <br /> <br /> ವಿಶೇಷವಾಗಿ ಲಂಬಾಣಿ ತಾಂಡಾಗಳಲ್ಲಿ ಯುವತಿಯರು ಸಂಭ್ರಮ, ಸಡಗರಗಳಿಂದ ಸಾಮೂಹಿಕ ನೃತ್ಯ ಮತ್ತು ಜನಪದ ಹಾಡುಗಳನ್ನು ಹಾಡುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.<br /> <br /> ಹೊಟ್ಟೆಪಾಡಿಗಾಗಿ ದೂರದ ಬೆಂಗಳೂರು, ಮಂಡ್ಯ, ಮೈಸೂರು, ಮಲೆನಾಡಿನ ಕಾಫಿ ಸೀಮೆಗೆ `ಗುಳೆ~ ಹೋಗುವ ಲಂಬಾಣಿ ಸಮುದಾಯದವರು ದೀಪಾವಳಿ ಹಾಗೂ ಯುಗಾದಿ ಸಂದರ್ಭದಲ್ಲಿ ತಮ್ಮ ತಾಂಡಾಗಳಿಗೆ ಮರಳಿ, ಬಂಧು, ಬಳಗದೊಂದಿಗೆ ಸೇರಿ ಹಬ್ಬದಲ್ಲಿ ನೃತ್ಯ, ಹಾಡುಹಸೆಯ ಮೂಲಕ ತಮ್ಮ ಎಲ್ಲಾ ನೋವನ್ನು ಮರೆತು ಸಂಭ್ರಮಿಸುತ್ತಾರೆ.<br /> <br /> ತಾಲ್ಲೂಕಿನ ಬ್ಯಾಟಗಾರನಹಳ್ಳಿ, ಗಾಂಧಿನಗರ, ಜ್ಯೋತಿಪುರ ತಾಂಡಾ, ವೆಂಕಟೇಶಪುರ ತಾಂಡಾ, ಕೊರಟಿಕೆರೆ ತಾಂಡಾ ಸೇರಿದಂತೆ ಎಲ್ಲಾ ತಾಂಡಗಳಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.<br /> <br /> ತಲೆಯ ಮೇಲೆ ಹೂವಿನ ಪುಟ್ಟಿ ಹೊತ್ತ ಲಂಬಾಣಿ ಯುವತಿಯರು ತಾಂಡಕ್ಕೆ ಹೊಂದಿಕೊಂಡಿರುವ ಗುಡ್ಡ ಹಾಗೂ ಅರಣ್ಯ ಪ್ರದೇಶದಲ್ಲಿ ಜನಾಂಗದ ಸಾಮೂಹಿಕ `ದವಾಳಿ~ ನೃತ್ಯ ಮಾಡುತ್ತಾ, ಜಾನಪದ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಿದರು.<br /> <br /> ಬ್ಯಾಟಗಾರನಹಳ್ಳಿ, ಗಾಂಧಿನಗರ ಹಾಗೂ ಜ್ಯೋತಿಪುರ ತಾಂಡಾದ ನೂರಾರು ಹದಿಹರೆಯದ ಯುವತಿಯರು ಗುರುವಾರ ಬೆಳಿಗ್ಗೆ ಗಾಂಧಿನಗರ ತಾಂಡಾದ ಸಮೀಪ ಇರುವ ಅರಣ್ಯ ಪ್ರದೇಶದಲ್ಲಿ `ವರ್ಷದಾಡೇರ್ ಕೋರ್ ದವಾಳಿ ಲೋಕ್ತೋನ್ ಮೇರಾ~ (ವರ್ಷಕ್ಕೊಮ್ಮೆ ಬರುವ ದೀಪಾವಳಿ ಎಲ್ಲರಿಗೂ ಆರೋಗ್ಯ, ಸಮೃದ್ಧಿ ತರಲಿ) ಎಂಬ ಜನಪದ ಆಶಯದ ಹಾಡುಗಳನ್ನು ಹಾಡುತ್ತಾ, ಲಯಬದ್ಧವಾಗಿ ಹೆಜ್ಜೆ ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು: </strong>ತಾಲ್ಲೂಕಿನಲ್ಲಿ `ಬರ~ ಪರಿಸ್ಥಿತಿಯ ನಡುವೆಯೂ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. <br /> <br /> ವಿಶೇಷವಾಗಿ ಲಂಬಾಣಿ ತಾಂಡಾಗಳಲ್ಲಿ ಯುವತಿಯರು ಸಂಭ್ರಮ, ಸಡಗರಗಳಿಂದ ಸಾಮೂಹಿಕ ನೃತ್ಯ ಮತ್ತು ಜನಪದ ಹಾಡುಗಳನ್ನು ಹಾಡುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.<br /> <br /> ಹೊಟ್ಟೆಪಾಡಿಗಾಗಿ ದೂರದ ಬೆಂಗಳೂರು, ಮಂಡ್ಯ, ಮೈಸೂರು, ಮಲೆನಾಡಿನ ಕಾಫಿ ಸೀಮೆಗೆ `ಗುಳೆ~ ಹೋಗುವ ಲಂಬಾಣಿ ಸಮುದಾಯದವರು ದೀಪಾವಳಿ ಹಾಗೂ ಯುಗಾದಿ ಸಂದರ್ಭದಲ್ಲಿ ತಮ್ಮ ತಾಂಡಾಗಳಿಗೆ ಮರಳಿ, ಬಂಧು, ಬಳಗದೊಂದಿಗೆ ಸೇರಿ ಹಬ್ಬದಲ್ಲಿ ನೃತ್ಯ, ಹಾಡುಹಸೆಯ ಮೂಲಕ ತಮ್ಮ ಎಲ್ಲಾ ನೋವನ್ನು ಮರೆತು ಸಂಭ್ರಮಿಸುತ್ತಾರೆ.<br /> <br /> ತಾಲ್ಲೂಕಿನ ಬ್ಯಾಟಗಾರನಹಳ್ಳಿ, ಗಾಂಧಿನಗರ, ಜ್ಯೋತಿಪುರ ತಾಂಡಾ, ವೆಂಕಟೇಶಪುರ ತಾಂಡಾ, ಕೊರಟಿಕೆರೆ ತಾಂಡಾ ಸೇರಿದಂತೆ ಎಲ್ಲಾ ತಾಂಡಗಳಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.<br /> <br /> ತಲೆಯ ಮೇಲೆ ಹೂವಿನ ಪುಟ್ಟಿ ಹೊತ್ತ ಲಂಬಾಣಿ ಯುವತಿಯರು ತಾಂಡಕ್ಕೆ ಹೊಂದಿಕೊಂಡಿರುವ ಗುಡ್ಡ ಹಾಗೂ ಅರಣ್ಯ ಪ್ರದೇಶದಲ್ಲಿ ಜನಾಂಗದ ಸಾಮೂಹಿಕ `ದವಾಳಿ~ ನೃತ್ಯ ಮಾಡುತ್ತಾ, ಜಾನಪದ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಿದರು.<br /> <br /> ಬ್ಯಾಟಗಾರನಹಳ್ಳಿ, ಗಾಂಧಿನಗರ ಹಾಗೂ ಜ್ಯೋತಿಪುರ ತಾಂಡಾದ ನೂರಾರು ಹದಿಹರೆಯದ ಯುವತಿಯರು ಗುರುವಾರ ಬೆಳಿಗ್ಗೆ ಗಾಂಧಿನಗರ ತಾಂಡಾದ ಸಮೀಪ ಇರುವ ಅರಣ್ಯ ಪ್ರದೇಶದಲ್ಲಿ `ವರ್ಷದಾಡೇರ್ ಕೋರ್ ದವಾಳಿ ಲೋಕ್ತೋನ್ ಮೇರಾ~ (ವರ್ಷಕ್ಕೊಮ್ಮೆ ಬರುವ ದೀಪಾವಳಿ ಎಲ್ಲರಿಗೂ ಆರೋಗ್ಯ, ಸಮೃದ್ಧಿ ತರಲಿ) ಎಂಬ ಜನಪದ ಆಶಯದ ಹಾಡುಗಳನ್ನು ಹಾಡುತ್ತಾ, ಲಯಬದ್ಧವಾಗಿ ಹೆಜ್ಜೆ ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>