<p><strong>ದಾವಣಗೆರೆ: </strong>ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ತಡಮಾಡದೇ ಶಿಸ್ತು ಕ್ರಮ ಜರುಗಿಸಬೇಕು. ಯಾರನ್ನೂ ಕ್ಷಮಿಸಬಾರದು. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಪಾರದರ್ಶಕತೆ ಅನುಸರಿಸಬೇಕು. ಆದಾಯದ ಶೇ 1ರಷ್ಟನ್ನು ಪಕ್ಷಕ್ಕೆ ದೇಣಿಗೆ ನೀಡಬೇಕು. ಪ್ರತಿ ನಾಯಕರೂ ಸಹ ಆಸ್ತಿ ಘೋಷಿಸಬೇಕು.<br /> <br /> - ನಗರದ ಬಾಪೂಜಿ `ಬಿ~ ಸ್ಕೂಲ್ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಜತೆ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಶಾಸಕರು, ಸಂಸದರಿಂದ ಕೇಳಿಬಂದ ಒತ್ತಾಯಗಳಿವು.<br /> <br /> ರಾಜ್ಯದಲ್ಲಿ ಬೇರೆ ಪಕ್ಷಗಳಿಗಿಂತ, ಕಾಂಗ್ರೆಸ್ಗೆ ಕಾಂಗ್ರೆಸ್ನಿಂದಲೇ ಭಯವಿದೆ. ಹಿರಿಯ ನಾಯಕರಿಗೆ ಹೊಣೆಗಾರಿಕೆ ಇಲ್ಲ. ಹಿರಿಯರು- ಕಿರಿಯರ ನಡುವೆ ಬಹಳಷ್ಟು ಅಂತರವಿದೆ. ಇದನ್ನು ಕಡಿಮೆಗೊಳಿಸಬೇಕು. ಈಚೆಗೆ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮ ನಡೆಸಲಾಯಿತು. ರಾಜ್ಯಮಟ್ಟದ ನಾಯಕರು ಎನಿಸಿಕೊಂಡವರು ಸಮರ್ಪಕವಾಗಿ ಪಾಲ್ಗೊಳ್ಳಲಿಲ್ಲ. <br /> <br /> ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಜಾರಿಗೆ ಕ್ರಮ ವಹಿಸಬೇಕು. ಪಕ್ಷದಲ್ಲಿರುವ ಸೂಕ್ಷಾತಿಸೂಕ್ಷ್ಮ ಜಾತಿಯ ಶಾಸಕ, ಜನಪ್ರತಿನಿಧಿಗೆ ದೆಹಲಿಗೆ ಬಂದು ನಾಯಕರ ಭೇಟಿಯಾಗುವ ಶಕ್ತಿ ಇಲ್ಲ. ಇಲ್ಲಿನ ನಾಯಕರು, ನಮ್ಮ ಸಮಸ್ಯೆ ಆಲಿಸುವುದಿಲ್ಲ. ಈ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.<br /> <br /> ಕಾಂಗ್ರೆಸ್, ಕೋಮುವಾದಿ ಮತ್ತು ಜಾತಿವಾದಿ ಪಕ್ಷಗಳ ವಿರುದ್ಧ ಹೋರಾಡಬೇಕಿದೆ. ಇದಕ್ಕಾಗಿ ಸಾಮೂಹಿಕ ನಾಯಕತ್ವ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.<br /> <br /> ಪಕ್ಷವನ್ನು ಭ್ರಷ್ಟಾಚಾರ ತಿನ್ನುತ್ತಿದೆ. ಹೀಗಾಗಿ, ಪಕ್ಷದ ನಿಯಮಗಳ ಪ್ರಕಾರ, ಶೇ 1ರಷ್ಟು ಆದಾಯ ಪಕ್ಷಕ್ಕೆ ದೇಣಿಗೆ ನೀಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ಪಕ್ಷಕ್ಕೆ ಕಚೇರಿ ಮೊದಲಾದ ಮೂಲಸೌಕರ್ಯ ಕಲ್ಪಿಸಬೇಕು. ಆಗ, ವ್ಯಕ್ತಿಗಳ ವೈಭವೀಕರಣ ನಿಲ್ಲುತ್ತದೆ ಎಂದು ಸಲಹೆ ಬಂದಿತು.<br /> <br /> <strong>ಅಭ್ಯರ್ಥಿ ಆಯ್ಕೆ ಸರಿಯಾಗಿರಲಿ </strong><br /> ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಆಯ್ಕೆಯೂ ಸರಿಯಾಗಿರಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದರು.<br /> <br /> ನಗರದಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ನಡೆದ ಮೊದಲ ಅಧಿವೇಶನದ ಸಂವಾದದಲ್ಲಿ ಭಾನುವಾರ ಅವರು ಮಾತನಾಡಿದರು.<br /> <br /> ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಿಂದ ರಾಜಕೀಯ ಸ್ಥಿತ್ಯಂತರಗಳು ನಡೆದಿವೆ. ಆದ್ದರಿಂದ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಒಳ್ಳೆಯವರಾಗಿದ್ದು, ಸಚ್ಚಾರಿತ್ರ್ಯ ಹೊಂದಿರಬೇಕು ಎಂದು ಅವರು ಸೂಚ್ಯವಾಗಿ ಹೇಳಿದರು.<br /> <br /> ಬಿಜೆಪಿಯಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ಅದೇ ರೀತಿ ನಮ್ಮಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಬಾರದು. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಯಬಹುದು. ಬಿಜೆಪಿ ಆಡಳಿತದಿಂದ ಜನಸಾಮಾನ್ಯ ಬೇಸತ್ತಿದ್ದಾನೆ. ಆದ್ದರಿಂದ ಕಾಂಗ್ರೆಸ್ಗೆ ಬೇರೆ ಹೋಲಿಕೆ ಬೇಡ. ಕಾಂಗ್ರೆಸ್ಗೆ ಆ ಪಕ್ಷವೇ ಸಾಟಿ ಎಂದರು.<br /> <br /> ಕಾರ್ಯಕರ್ತರಲ್ಲಿ ಸಮಗ್ರವಾದ ಮಾಹಿತಿ ಇರುತ್ತದೆ. ಪಕ್ಷದ ಗ್ರಾಮಮಟ್ಟದ ಅಧ್ಯಕ್ಷನಿಂದ ಹಿಡಿದು ಬ್ಲಾಕ್, ಜಿಲ್ಲಾಮಟ್ಟದ ಪದಾಧಿಕಾರಿಗಳವರೆಗೆ ಎಲ್ಲರ ಬಳಿಯೂ ಒಳ್ಳೆಯ ಮಾಹಿತಿ ಇರುತ್ತದೆ. ಅದಕ್ಕಾಗಿ ಒಳ್ಳೆಯ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಬೇಕು ಎಂದು ಸೂಚಿಸಿದರು.<br /> <br /> ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಚರ್ಚೆಗಳು ಕೇಳಿಬಂದವು. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ ಬಗ್ಗೆ, ಕಾರ್ಯಕರ್ತರಲ್ಲಿನ ಗೊಂದಲ -ಹೀಗೆ ಹಲವಾರು ವಿಷಯಗಳು ಚರ್ಚೆಯಾದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ತಡಮಾಡದೇ ಶಿಸ್ತು ಕ್ರಮ ಜರುಗಿಸಬೇಕು. ಯಾರನ್ನೂ ಕ್ಷಮಿಸಬಾರದು. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಪಾರದರ್ಶಕತೆ ಅನುಸರಿಸಬೇಕು. ಆದಾಯದ ಶೇ 1ರಷ್ಟನ್ನು ಪಕ್ಷಕ್ಕೆ ದೇಣಿಗೆ ನೀಡಬೇಕು. ಪ್ರತಿ ನಾಯಕರೂ ಸಹ ಆಸ್ತಿ ಘೋಷಿಸಬೇಕು.<br /> <br /> - ನಗರದ ಬಾಪೂಜಿ `ಬಿ~ ಸ್ಕೂಲ್ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಜತೆ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಶಾಸಕರು, ಸಂಸದರಿಂದ ಕೇಳಿಬಂದ ಒತ್ತಾಯಗಳಿವು.<br /> <br /> ರಾಜ್ಯದಲ್ಲಿ ಬೇರೆ ಪಕ್ಷಗಳಿಗಿಂತ, ಕಾಂಗ್ರೆಸ್ಗೆ ಕಾಂಗ್ರೆಸ್ನಿಂದಲೇ ಭಯವಿದೆ. ಹಿರಿಯ ನಾಯಕರಿಗೆ ಹೊಣೆಗಾರಿಕೆ ಇಲ್ಲ. ಹಿರಿಯರು- ಕಿರಿಯರ ನಡುವೆ ಬಹಳಷ್ಟು ಅಂತರವಿದೆ. ಇದನ್ನು ಕಡಿಮೆಗೊಳಿಸಬೇಕು. ಈಚೆಗೆ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮ ನಡೆಸಲಾಯಿತು. ರಾಜ್ಯಮಟ್ಟದ ನಾಯಕರು ಎನಿಸಿಕೊಂಡವರು ಸಮರ್ಪಕವಾಗಿ ಪಾಲ್ಗೊಳ್ಳಲಿಲ್ಲ. <br /> <br /> ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಜಾರಿಗೆ ಕ್ರಮ ವಹಿಸಬೇಕು. ಪಕ್ಷದಲ್ಲಿರುವ ಸೂಕ್ಷಾತಿಸೂಕ್ಷ್ಮ ಜಾತಿಯ ಶಾಸಕ, ಜನಪ್ರತಿನಿಧಿಗೆ ದೆಹಲಿಗೆ ಬಂದು ನಾಯಕರ ಭೇಟಿಯಾಗುವ ಶಕ್ತಿ ಇಲ್ಲ. ಇಲ್ಲಿನ ನಾಯಕರು, ನಮ್ಮ ಸಮಸ್ಯೆ ಆಲಿಸುವುದಿಲ್ಲ. ಈ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.<br /> <br /> ಕಾಂಗ್ರೆಸ್, ಕೋಮುವಾದಿ ಮತ್ತು ಜಾತಿವಾದಿ ಪಕ್ಷಗಳ ವಿರುದ್ಧ ಹೋರಾಡಬೇಕಿದೆ. ಇದಕ್ಕಾಗಿ ಸಾಮೂಹಿಕ ನಾಯಕತ್ವ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.<br /> <br /> ಪಕ್ಷವನ್ನು ಭ್ರಷ್ಟಾಚಾರ ತಿನ್ನುತ್ತಿದೆ. ಹೀಗಾಗಿ, ಪಕ್ಷದ ನಿಯಮಗಳ ಪ್ರಕಾರ, ಶೇ 1ರಷ್ಟು ಆದಾಯ ಪಕ್ಷಕ್ಕೆ ದೇಣಿಗೆ ನೀಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ಪಕ್ಷಕ್ಕೆ ಕಚೇರಿ ಮೊದಲಾದ ಮೂಲಸೌಕರ್ಯ ಕಲ್ಪಿಸಬೇಕು. ಆಗ, ವ್ಯಕ್ತಿಗಳ ವೈಭವೀಕರಣ ನಿಲ್ಲುತ್ತದೆ ಎಂದು ಸಲಹೆ ಬಂದಿತು.<br /> <br /> <strong>ಅಭ್ಯರ್ಥಿ ಆಯ್ಕೆ ಸರಿಯಾಗಿರಲಿ </strong><br /> ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಆಯ್ಕೆಯೂ ಸರಿಯಾಗಿರಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದರು.<br /> <br /> ನಗರದಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ನಡೆದ ಮೊದಲ ಅಧಿವೇಶನದ ಸಂವಾದದಲ್ಲಿ ಭಾನುವಾರ ಅವರು ಮಾತನಾಡಿದರು.<br /> <br /> ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಿಂದ ರಾಜಕೀಯ ಸ್ಥಿತ್ಯಂತರಗಳು ನಡೆದಿವೆ. ಆದ್ದರಿಂದ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಒಳ್ಳೆಯವರಾಗಿದ್ದು, ಸಚ್ಚಾರಿತ್ರ್ಯ ಹೊಂದಿರಬೇಕು ಎಂದು ಅವರು ಸೂಚ್ಯವಾಗಿ ಹೇಳಿದರು.<br /> <br /> ಬಿಜೆಪಿಯಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ಅದೇ ರೀತಿ ನಮ್ಮಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಬಾರದು. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಯಬಹುದು. ಬಿಜೆಪಿ ಆಡಳಿತದಿಂದ ಜನಸಾಮಾನ್ಯ ಬೇಸತ್ತಿದ್ದಾನೆ. ಆದ್ದರಿಂದ ಕಾಂಗ್ರೆಸ್ಗೆ ಬೇರೆ ಹೋಲಿಕೆ ಬೇಡ. ಕಾಂಗ್ರೆಸ್ಗೆ ಆ ಪಕ್ಷವೇ ಸಾಟಿ ಎಂದರು.<br /> <br /> ಕಾರ್ಯಕರ್ತರಲ್ಲಿ ಸಮಗ್ರವಾದ ಮಾಹಿತಿ ಇರುತ್ತದೆ. ಪಕ್ಷದ ಗ್ರಾಮಮಟ್ಟದ ಅಧ್ಯಕ್ಷನಿಂದ ಹಿಡಿದು ಬ್ಲಾಕ್, ಜಿಲ್ಲಾಮಟ್ಟದ ಪದಾಧಿಕಾರಿಗಳವರೆಗೆ ಎಲ್ಲರ ಬಳಿಯೂ ಒಳ್ಳೆಯ ಮಾಹಿತಿ ಇರುತ್ತದೆ. ಅದಕ್ಕಾಗಿ ಒಳ್ಳೆಯ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಬೇಕು ಎಂದು ಸೂಚಿಸಿದರು.<br /> <br /> ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಚರ್ಚೆಗಳು ಕೇಳಿಬಂದವು. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ ಬಗ್ಗೆ, ಕಾರ್ಯಕರ್ತರಲ್ಲಿನ ಗೊಂದಲ -ಹೀಗೆ ಹಲವಾರು ವಿಷಯಗಳು ಚರ್ಚೆಯಾದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>