ಸಾಲ ವಸೂಲಾತಿಗಾಗಿ ಬ್ಯಾಂಕ್ ಕೆಲ ಕಠಿಣ ಕ್ರಮ ಕೈಗೊಂಡಿದೆ. ಇದರಿಂದ ರೈತರು ಬೇಸರ ಮಾಡಿಕೊಳ್ಳಬಾರದು. ಬ್ಯಾಂಕ್ನ ಅಭಿವೃದ್ಧಿಗೆ ಮತ್ತು ನಬಾರ್ಡ್ನಿಂದ ಹೆಚ್ಚಿನ ಸಹಾಯಧನ ಪಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಇನ್ನೂ ಸಾಲ ಉಳಿಸಿಕೊಂಡಿರುವ ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕ್ನ ಏಳಿಗೆಗೆ ಕಾರಣೀಭೂತರಾಗಬೇಕು ಎಂದು ಅವರು ತಿಳಿಸಿದರು.
ಉಪಾಧ್ಯಕ್ಷೆ ಸುಭದ್ರಮ್ಮ, ಜಿ. ಶಂಕರಮೂರ್ತಿ, ಎಚ್.ಎಂ. ಗಂಗಾಧರಯ್ಯ, ಕೆ.ವಿ. ನಾಗರಾಜ್, ಕೆ. ಕರಿಬಸಪ್ಪ, ಬಿ.ಜಿ. ಶಿವಕುಮಾರ್, ಕೆ.ಇ. ನಾಗರಾಜ್ ಮಾದೇನಹಳ್ಳಿ, ಟಿ. ನಾಗರಾಜಪ್ಪ, ಎಚ್.ಪಿ. ವೇದಮೂರ್ತಿ, ಕೆ. ಶಿವಮೂರ್ತಿ, ಜಿ. ಈಶ್ವರಪ್ಪ, ಕೆ.ಎಸ್. ಸಿದ್ದಬಸಪ್ಪ ಇತರರು ಉಪಸ್ಥಿತರಿದ್ದರು.