ಕೆಲವು ರಾಜಕೀಯ ಶಕ್ತಿಗಳು ಪೀಠಾಧ್ಯಕ್ಷರಿಗೆ ಆಮಿಷ ಒಡ್ಡಿ ಧರ್ಮ ಒಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.
ಈ ತಿಂಗಳ 24ರಂದು ಗದಗದಲ್ಲಿ ವೀರಶೈವ ಲಿಂಗಾಯತ ಸಮಾವೇಶ ನಡೆಯಲಿದ್ದು, ಪಂಚಪೀಠಾಧೀಶರು, ಶಿವಾಚಾರ್ಯರು, ವಿರಕ್ತ ಮಠಾಧೀಶರ ಸಮಾವೇಶ ನಡೆಯಲಿದೆ. ಎರಡು ಲಕ್ಷ ಭಕ್ತರು ಸೇರಲಿದ್ದಾರೆ ಎಂದು ಅವರು ಹೇಳಿದರು.