ದೇಶದ ಆಡಳಿತ ರಥದ ಸಾರಥ್ಯಕ್ಕೆ ಅಗತ್ಯವಾದ ಕಾನೂನಿನ ಚೌಕಟ್ಟು ನಿರ್ಮಿಸಿದ ಬಾಬಾಸಾಹೇಬರ ಚಿಂತನೆಗಳನ್ನು ನಾವು ಮರೆತಿದ್ದೇವೆ. ಅವರ ಆದರ್ಶಗಳ ಕುರಿತು ಕನಿಷ್ಠ ನಾಲ್ಕಾರು ನಿಮಿಷವೂ ವ್ಯವಧಾನದಿಂದ ಆಲೋಚಿಸಲು ಅಸಮರ್ಥರಾಗಿರುವ ನಾವು, ಅವರೇ ಚಿಂತನೆಯ ಮೂಸೆಯಲ್ಲಿ ಅರಳಿದ ಮೀಸಲಾತಿಯ ಅಡಿಯಲ್ಲಿ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದೇವೆ ಎಂದು ವಿಷಾದಿಸಿದರು.
ದಲಿತ ಮುಖಂಡ ಕಣವಿಹಳ್ಳಿ ಮಂಜುನಾಥ ಮಾತನಾಡಿ, ಶೋಷಿತ ಸಮುದಾಯಗಳಿಗೆ ಆತ್ಮಸ್ಥೈರ್ಯ ಹಾಗೂ ಚೈತನ್ಯದ ಶಕ್ತಿ ತುಂಬುವ ಜತೆಗೆ, ತಳಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಕೊಂಡೊಯ್ಯಲು ಅಗತ್ಯ ಕಾನೂನು ರಚಿಸಿ, ಸಾಮಾಜಿಕನ್ಯಾಯಕ್ಕೆ ನೆಲೆಗಟ್ಟು ಕಟ್ಟಿಕೊಟ್ಟ ಮಹಾಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಎಂದು ಸ್ಮರಿಸಿದರು.
ದಲಿತ ಸಂಘಟನೆಗಳ ಮುಖಂಡರಾದ ಕೊಂಗನಹೊಸೂರು ಶಿವಣ್ಣ, ಉಚ್ಚಂಗೆಪ್ಪ, ಮಹಾಂತೇಶ್, ಚಂದ್ರಪ್ಪ, ಗೋಣೆಪ್ಪ, ಮಾರುತಿ, ಮಂಜುನಾಥ ಉಪಸ್ಥಿತರಿದ್ದರು