<p><strong>ಹರಿಹರ: </strong>ಸಂಶೋಧನೆಯಿಂದ ವಿಷಯದ ಬಗ್ಗೆ ಹೊಸ ಹೊಸ ವಿಚಾರ ಹಾಗೂ ಅಭಿಪ್ರಾಯ ಮಂಡನೆ ಆಗುತ್ತದೆ ಎಂದು ಕಾನೂನು<br /> ಮತ್ತು ಮಾನವ ಹಕ್ಕುಗಳ ಇಲಾಖೆಯ ಉಪಕಾರ್ಯದರ್ಶಿ ಉಮೇಶ್ ಮೂಲಿಮನಿ ಅಭಿಪ್ರಾಯಪಟ್ಟರು.<br /> <br /> ನಗರದ ಎಸ್ಜೆವಿಪಿ ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ತಾಲ್ಲೂಕು ಕಸಾಪ, ಚುಟುಕು ಸಾಹಿತ್ಯ ಪರಿಷತ್ ಮತ್ತು ಸಹನಾದ್ರಿ ಪ್ರಕಾಶನದ ಆಶ್ರಯದಲ್ಲಿ ಭಾನುವಾರ ನಡೆದ ಡಾ.ನಾ.ಕೊಟ್ರೇಶ್ ಉತ್ತಂಗಿ ಸಂಶೋಧನಾ ಕೃತಿ ‘ಹರಿಹರದೆಳೆಗಳು’ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಬರವಣಿಗೆ ಮತ್ತು ಸಾಹಿತ್ಯ ಅಧ್ಯಯನ ಕುಂಠಿತವಾಗುತ್ತಿರುವ ಸಮಯದಲ್ಲಿ ಇತಿಹಾಸ ಸಂಶೋಧಿಸಿ, ಕೃತಿ ರಚಿಸುವದರಿಂದ ನೂತನ ವಿವರಗಳು ದೊರೆಯುತ್ತವೆ ಎಂದು ಹೇಳಿದರು.<br /> <br /> ಕೃತಿ ಬಿಡುಗಡೆ ಮಾಡಿದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಾಹಿತಿ ಎಸ್.ವಿದ್ಯಾಶಂಕರ್ ಮಾತನಾಡಿ, ಕೃತಿಗಳ ಅಧ್ಯಯನದಿಂದ ಮಾತ್ರ ಲೇಖಕರ ಶ್ರಮ ಏನೆಂಬುದು ಅರ್ಥವಾಗುತ್ತದೆ. ಇತಿಹಾಸದ ಸಂಶೋಧನ ಕೃತಿಗಳನ್ನು ಓದುವುದರಿಂದ ಇತಿಹಾಸದ ಬಗ್ಗೆ ಅರಿವು ಮೂಡುತ್ತದೆ ಎಂದರು.<br /> <br /> ಕೃತಿ ಸಂಶೋಧನೆಗೆ ಸಹಕಾರ ನೀಡಿದ ಶಾಸನ ತಜ್ಞ ಬುರುಡೆಕಟ್ಟಿ ಮಂಜಪ್ಪ, ಗುರುಸಿದ್ದಯ್ಯ, ತಳಾಸದ ಬಸವರಾಜಣ್ಣ, ರಾಘವೇಂದ್ರಾಚಾರ್, ಗಣೇಶ್ ಬಿಳಿಗಿ ಮತ್ತು ಟಿ.ಸಿ.ಬೆಟ್ಟಪ್ಪ ಅವರನ್ನು ಗೌರವಿಸಲಾಯಿತು.<br /> <br /> ದಾವಣಗೆರೆ ಧವನ್ ಪದವಿ ಕಾಲೇಜು ಪ್ರಾಂಶುಪಾಲ ಬಾತಿ ಬಸವರಾಜ್, ನಗರಸಭೆ ಸದಸ್ಯ ಜಿ.ಸುರೇಶಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಲೇಖಕ ಡಾ.ನಾ.ಕೊಟ್ರೇಶ್ ಉತ್ತಂಗಿ, ಶಶಿಕಲಾ ಡಾ.ನಾ.ಕೊ.ಉತ್ತಂಗಿ, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಟ್ರೇಶ್ ಉಪಸ್ಥಿತರಿದ್ದರು.<br /> <br /> ಲೇಖಕ ಡಾ.ನಾ.ಕೊಟೇಶ್ ಉತ್ತಂಗಿ ಪ್ರಾಸ್ತಾವಿಕ ಮಾತನಾಡಿದರು. ಷಣ್ಮುಖ ಪ್ರಾರ್ಥಿಸಿದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಎ.ರಿಯಾಜ್ ಅಹಮದ್ ಸ್ವಾಗತಿಸಿದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ರೇವಣನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ: </strong>ಸಂಶೋಧನೆಯಿಂದ ವಿಷಯದ ಬಗ್ಗೆ ಹೊಸ ಹೊಸ ವಿಚಾರ ಹಾಗೂ ಅಭಿಪ್ರಾಯ ಮಂಡನೆ ಆಗುತ್ತದೆ ಎಂದು ಕಾನೂನು<br /> ಮತ್ತು ಮಾನವ ಹಕ್ಕುಗಳ ಇಲಾಖೆಯ ಉಪಕಾರ್ಯದರ್ಶಿ ಉಮೇಶ್ ಮೂಲಿಮನಿ ಅಭಿಪ್ರಾಯಪಟ್ಟರು.<br /> <br /> ನಗರದ ಎಸ್ಜೆವಿಪಿ ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ತಾಲ್ಲೂಕು ಕಸಾಪ, ಚುಟುಕು ಸಾಹಿತ್ಯ ಪರಿಷತ್ ಮತ್ತು ಸಹನಾದ್ರಿ ಪ್ರಕಾಶನದ ಆಶ್ರಯದಲ್ಲಿ ಭಾನುವಾರ ನಡೆದ ಡಾ.ನಾ.ಕೊಟ್ರೇಶ್ ಉತ್ತಂಗಿ ಸಂಶೋಧನಾ ಕೃತಿ ‘ಹರಿಹರದೆಳೆಗಳು’ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಬರವಣಿಗೆ ಮತ್ತು ಸಾಹಿತ್ಯ ಅಧ್ಯಯನ ಕುಂಠಿತವಾಗುತ್ತಿರುವ ಸಮಯದಲ್ಲಿ ಇತಿಹಾಸ ಸಂಶೋಧಿಸಿ, ಕೃತಿ ರಚಿಸುವದರಿಂದ ನೂತನ ವಿವರಗಳು ದೊರೆಯುತ್ತವೆ ಎಂದು ಹೇಳಿದರು.<br /> <br /> ಕೃತಿ ಬಿಡುಗಡೆ ಮಾಡಿದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಾಹಿತಿ ಎಸ್.ವಿದ್ಯಾಶಂಕರ್ ಮಾತನಾಡಿ, ಕೃತಿಗಳ ಅಧ್ಯಯನದಿಂದ ಮಾತ್ರ ಲೇಖಕರ ಶ್ರಮ ಏನೆಂಬುದು ಅರ್ಥವಾಗುತ್ತದೆ. ಇತಿಹಾಸದ ಸಂಶೋಧನ ಕೃತಿಗಳನ್ನು ಓದುವುದರಿಂದ ಇತಿಹಾಸದ ಬಗ್ಗೆ ಅರಿವು ಮೂಡುತ್ತದೆ ಎಂದರು.<br /> <br /> ಕೃತಿ ಸಂಶೋಧನೆಗೆ ಸಹಕಾರ ನೀಡಿದ ಶಾಸನ ತಜ್ಞ ಬುರುಡೆಕಟ್ಟಿ ಮಂಜಪ್ಪ, ಗುರುಸಿದ್ದಯ್ಯ, ತಳಾಸದ ಬಸವರಾಜಣ್ಣ, ರಾಘವೇಂದ್ರಾಚಾರ್, ಗಣೇಶ್ ಬಿಳಿಗಿ ಮತ್ತು ಟಿ.ಸಿ.ಬೆಟ್ಟಪ್ಪ ಅವರನ್ನು ಗೌರವಿಸಲಾಯಿತು.<br /> <br /> ದಾವಣಗೆರೆ ಧವನ್ ಪದವಿ ಕಾಲೇಜು ಪ್ರಾಂಶುಪಾಲ ಬಾತಿ ಬಸವರಾಜ್, ನಗರಸಭೆ ಸದಸ್ಯ ಜಿ.ಸುರೇಶಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಲೇಖಕ ಡಾ.ನಾ.ಕೊಟ್ರೇಶ್ ಉತ್ತಂಗಿ, ಶಶಿಕಲಾ ಡಾ.ನಾ.ಕೊ.ಉತ್ತಂಗಿ, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಟ್ರೇಶ್ ಉಪಸ್ಥಿತರಿದ್ದರು.<br /> <br /> ಲೇಖಕ ಡಾ.ನಾ.ಕೊಟೇಶ್ ಉತ್ತಂಗಿ ಪ್ರಾಸ್ತಾವಿಕ ಮಾತನಾಡಿದರು. ಷಣ್ಮುಖ ಪ್ರಾರ್ಥಿಸಿದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಎ.ರಿಯಾಜ್ ಅಹಮದ್ ಸ್ವಾಗತಿಸಿದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ರೇವಣನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>