ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಪ್ರಧಾನಿ ಮೋದಿ ಅವರು ಅಸಾಮಾನ್ಯರು. ಅವರ ಮನಸ್ಸು ಸದಾ ಬಡವರು ಮತ್ತು ಸಾಮಾನ್ಯರಿಗಾಗಿ ಮಿಡಿಯುತ್ತದೆ. ತಮ್ಮ ಮನದ ಮಾತಿನ ಮೂಲಕ ಈ ದೇಶದ ಸಂಸ್ಕೃತಿ, ವೈವಿಧ್ಯತೆ, ಜನರ ಸಾಧನೆ ಬಗ್ಗೆ ಹೇಳುವ ಅವರು, ಉಳಿದವರಿಗೂ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.