ಕ್ರಮೇಣ ಇಳಿಕೆ: ‘ಶಾಲೆಗೆ ಮಕ್ಕಳನ್ನು ದಾಖಲಿಸದಿರುವುದು ಅಥವಾ ದಾಖಲಾದ ಮಕ್ಕಳನ್ನು ಶಾಲೆ ಬಿಡಿಸಲು ಬಹುತೇಕ ಪೋಷಕರು ಮುಂದಾಗುವುದಿಲ್ಲ. ಮನೆ, ಹೊಲದ ಕೆಲಸ, ಓದಿನಲ್ಲಿ ನಿರಾಸಕ್ತಿ, ಶಿಕ್ಷಣ ಕೊಡಿಸಲು ಪೋಷಕರ ನಿರ್ಲಕ್ಷ್ಯ ವಹಿಸುವ ಕಾರಣದಿಂದ ಕೆಲವು ಮಕ್ಕಳಷ್ಟೇ ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿವೇತನ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಮೊದಲಾದ ಸೌಲಭ್ಯಗಳು ಸಿಗುವುದಲ್ಲದೆ, ಪೋಷಕರು ಹಾಗೂ ಮಕ್ಕಳಿಗೆ ಶಿಕ್ಷಣದ ಮಹತ್ವವೇನೆಂದು ತಿಳಿದಿದೆ’ ಎಂದು ಅವರು ವಿವರಿಸಿದರು.