‘ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ನಿರ್ಮಾಣ ಮಠದ ಹಿಂದಿನ ಶ್ರೀಗಳ ಕನಸಾಗಿತ್ತು. ಅದಕ್ಕಾಗಿಯೇ, ಸಮುದಾಯದ ಸಂಸ್ಥೆಯಾದ ಕೆಎಲ್ಇಗೆ ಭೂಮಿ ದಾನ ಮಾಡಿದ್ದರು. ಸಂಸ್ಥೆಯು ಶ್ರೀಗಳ ಹೆಸರಿನಲ್ಲೇ ಆಸ್ಪತ್ರೆ ಮತ್ತು ಕಾಲೇಜು ನಿರ್ಮಿಸಲು ಮುಂದಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಉದ್ಯೋಗಾವಕಾಶ, ಉತ್ತಮ ಆರೋಗ್ಯ ಸೇವೆ ಹಾಗೂ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ’ ಎಂದರು.