ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಅಳ್ನಾವರ ನೂತನ ತಾಲ್ಲೂಕು ಪಂಚಾಯ್ತಿ ಅಸ್ವಿತ್ವಕ್ಕೆ

ಇಬ್ಬರೇ ಸದಸ್ಯರು, ಸ್ಮಿತಾ ಜವಳಿ, ಅಕ್ಕವ್ವ ಬಾಂಗಡಿ ಆಯ್ಕೆ ನಿಶ್ಚಿತ
Last Updated 17 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಅಳ್ನಾವರ: ಸ್ಥಳೀಯ ಜನರಬಹುವರ್ಷಗಳ ಬೇಡಿಕೆಯಾದ ನೂತನ ತಾಲ್ಲೂಕಿನ ತಾಲ್ಲೂಕುಪಂಚಾಯ್ತಿ ಸೋಮವಾರ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಆ. 19ರಂದು ಚುನಾವಣೆ ಜರುಗಲಿದೆ.

ಅಧ್ಯಕ್ಷ ಸ್ಥಾನ ಅನುಸೂಚಿತ ಮಹಿಳೆಗೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಬಾರಕೊಪ್ಪ ಕ್ಷೇತ್ರದ ಜೆಡಿಎಸ್‌ನಸ್ಮಿತಾ ಜವಳಿ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಹೊನ್ನಾಪೂರ ಕ್ಷೇತ್ರದ ಕಾಂಗ್ರೆಸ್‌ನಅಕ್ಕವ್ವ ಮಾರುತಿ ಬಾಂಗಡಿ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.

ಕೇವಲ ಇಬ್ಬರು ಸದಸ್ಯರ ಬಲಾಬಲ ಹೊಂದಿರುವ ಅಳ್ನಾವರ ತಾಲ್ಲೂಕು ಪಂಚಾಯ್ತಿ ಅತಿ ಕಡಿಮೆ ಸದಸ್ಯರನ್ನು ಹೊಂದಿರುವ ಚಿಕ್ಕ ತಾಲ್ಲೂಕು ಎನ್ನುವ ವಿಶೇಷತೆ ಹೊಂದಿದೆ. ನಾಲ್ಕು ಪಂಚಾಯ್ತಿ ಹಾಗೂ 13 ಗ್ರಾಮಗಳನ್ನು ಒಳಗೊಂಡ ತಾಲ್ಲೂಕು ಇದಾಗಿದೆ.

ಧಾರವಾಡ ತಾಲ್ಲೂಕು ಪಂಚಾಯ್ತಿಗೆ 2016ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದಕುಂಬಾರಕೊಪ್ಪ ಹಾಗೂ ಹೊನ್ನಾಪೂರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಧಾರವಾಡ ತಾಲ್ಲೂಕುಪಂಚಾಯ್ತಿಯಿಂದ ಬೇರ್ಪಡಿಸಿ ನೂತನ ಅಳ್ನಾವರ ತಾಲ್ಲೂಕು ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿತ್ತು ಎಂದು ಧಾರವಾಡ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಸ್. ಕಾದ್ರೊಳ್ಳಿ ಪ್ರಜಾವಾಣಿಗೆ ತಿಳಿಸಿದರು. ಮಾರ್ಚ್‌ನಲ್ಲಿ ತಾಲ್ಲೂಕು ಪಂಚಾಯ್ತಿಗಳಿಗೆ ನಡೆಯುವ ಚುನಾವಣೆಯಲ್ಲಿ ಅಳ್ನಾವರಕ್ಕೆ ಕನಿಷ್ಠ ಐದು ಸ್ಥಾನಗಳಾದರೂ ಸಿಗುವ ನಿರೀಕ್ಷೆಯಿದೆ ಎಂದರು.

ರಾಜ್ಯ ಸರ್ಕಾರ2017ರಲ್ಲಿ ಅಳ್ನಾವರವನ್ನು ಹೊಸ ತಾಲ್ಲೂಕು ಎಂದು ಘೋಷಿಸಿತ್ತು. 2018ರ ಫೆಬ್ರುವರಿಯಲ್ಲಿ ತಹಶೀಲ್ದಾರ್‌ ಕಚೇರಿ ಆರಂಭವಾಗಿತ್ತು. ಜಿಲ್ಲೆಯ ಹಿರಿಯ ಅಧಿಕಾರಿಗಳು ಕಳೆದ ಎರಡುತಿಂಗಳಿಂದ ಪಟ್ಟಣಕ್ಕೆ ನಿರಂತರವಾಗಿ ಭೇಟಿ ನೀಡಿ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಬೇಕಾದ ಕಟ್ಟಡವನ್ನು ಪರಿಶೀಲನೆ ಮಾಡಿದ್ದು,ಇಲ್ಲಿನ ಎಪಿಎಂಸಿ ಆವರಣದಲ್ಲಿ ಹೊಸ ಕಚೇರಿ ಆರಂಭವಾಗುವ ಸಾಧ್ಯತೆಯಿದೆ.

ಅಳ್ನಾವರ ತಾಲ್ಲೂಕು ರಚನೆಗಾಗಿ ನಾಲ್ಕು ದಶಕಗಳಿಂದ ಹೋರಾಟ ನಡೆದಿತ್ತು. ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದ ದಿವಂಗತ ಮುಜಾಹಿದ್ ಕಂಟ್ರ್ಯಾಕ್ಟರ್ ಅವರು ಕಂಡ ಹೊಸ ತಾಲ್ಲೂಕು ಪಂಚಾಯ್ತಿಯ ಆಸೆ ಈಗ ನನಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT