ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಅನಂತ್‌ ಹೆಗಲಿಗೆ ಎಎಪಿ ಜಿಲ್ಲಾ ಘಟಕದ ಹೊಣೆ

Last Updated 13 ಜನವರಿ 2022, 9:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಮ್‌ ಆದ್ಮಿ ಪಕ್ಷದ ಹುಬ್ಬಳ್ಳಿ ನಗರ ಘಟಕದ ಅಧ್ಯಕ್ಷರಾಗಿದ್ದ ಅನಂತಕುಮಾರ ಬುಗಡಿ ಅವರು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಶಾಮ ನರಗುಂದ (ಜಿಲ್ಲಾ ಘಟಕದ ಕಾರ್ಯದರ್ಶಿ), ಸಂತೋಷ ಮಾನೆ (ಸಹ ಕಾರ್ಯದರ್ಶಿ), ಶಶಿಕುಮಾರ ಸುಳ್ಳದ (ಉಪಾಧ್ಯಕ್ಷ ಹಾಗೂ ಹುಬ್ಬಳ್ಳಿ ಶಹರ ಸಂಚಾಲಕ), ಪ್ರವೀಣಕುಮಾರ ನಡಕಟ್ಟಿನ (ಉಪಾಧ್ಯಕ್ಷರು ಮತ್ತು ಧಾರವಾಡ ಶಹರ ಸಂಚಾಲಕ) ಆಯ್ಕೆ ಮಾಡಲಾಗಿದೆ.

ಮೊದಲು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಸಂತೋಷ ನರಗುಂದ ನಾಲ್ಕು ವರ್ಷಗಳ ಕಾಲ ಈ ಜವಾಬ್ದಾರಿ ನಿಭಾಯಿಸಿದ್ದರು. ಹೊಸ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದವರ ಮಾಹಿತಿ ಪರಿಶೀಲಿಸಿ ಪಕ್ಷದ ಜಿಲ್ಲೆಯ ಮುಖಂಡರು ಹಾಗೂ ರಾಜ್ಯ ನಾಯಕರ ಜೊತೆ ಚರ್ಚಿಸಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಸಂತೋಷ ತಿಳಿಸಿದ್ದಾರೆ.

ಹೊಸ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಸಂತೋಷ ‘ಸಂಘಟನೆಯ ಎಲ್ಲ ಕಾರ್ಯಕರ್ತರನ್ನು, ಮುಖಂಡರನ್ನು ಒಗ್ಗೂಡಿಸಿ ಜನರ ಧ್ವನಿಯಾಗಿ ಮುಂದೆ ಸಾಗುವುದೇ ನಾಯಕತ್ವದ ಪ್ರಥಮ ಕರ್ತವ್ಯ. ಯಾವಾಗಲೂ ತಂಡವಾಗಿ ಕೆಲಸ ಮಾಡಿದರೆ ಸದೃಢ ಸಂಘಟನೆ ಕಟ್ಟಲು ಸಾಧ್ಯ’ ಎಂದರು.

ಪಕ್ಷದ ಮುಖಂಡರಾದ ಬಸವರಾಜ ಮುಡಿಗೌಡರ, ಮಲ್ಲಪ್ಪ ತಡಸದ, ರೂಪಾಲಿ ನರಗುಂದ, ಕಸ್ತೂರಿ ಮುರಗೋಡ, ಸದಾನಂದ ಹೊಳೆಣ್ಣವರ, ದೀಪಿಕಾ ಮುತ್ತ, ಆರತಿ ನರಗುಂದ, ಹಸನಸಾಬ ಇನಾಮದಾರ, ಶಿವಕುಮಾರ ಬಾಗಲಕೋಟ, ಮಹಬೂಬ ಹರವಿ, ವಿಜಯ ಸಾಯಿ, ಡೇನಿಯಲ್ ಐಕೋಸ, ನಾಮದೇವ ಬೀಳಗಿ, ಕಲೀಮ ಲಕ್ಷ್ಮೇಶ್ವರ, ಶಿವಕಿರಣ ಅಗಡಿ, ರಮೇಶ ಜಮಾದಾರ, ಸವಿತಾ ಸಾವಂತವಾಡಿ, ಭೀಮಸಿಂಗ ಜಾಧವ, ವಿಕಾಸ ಸೊಪ್ಪಿನ, ಬೆಂಜಮಿನ ಸೋಂಘರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT