<p><strong>ಅಣ್ಣಿಗೇರಿ:</strong> ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪುರಸಭೆ ಸದಸ್ಯರು ಎಲ್ಲರೂ ಒಗ್ಗೂಡಿಕೊಂಡು ಶ್ರಮ ವಹಿಸಿ ಕೆಲಸ ಮಾಡಬೇಕು. ಅಲ್ಲದೇ ಪಟ್ಟಣದ ಅಂದವನ್ನು ಹೆಚ್ಚಿಸಲು ತಮ್ಮಲ್ಲಿರುವ ಹೊಸ, ಹೊಸ ಆಲೋಚನೆಗಳನ್ನು ತಿಳಿಸಿದರೆ ಅದಕ್ಕೆ ಪ್ರಾಮುಖ್ಯ ನೀಡಲಾಗುವುದು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.</p>.<p>ಅವರು ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಭಾಗವಹಿಸಿ ಮಾತನಾಡಿ, ತಾಲ್ಲೂಕು ಕೇಂದ್ರವಾಗಿರುವ ಪಟ್ಟಣಕ್ಕೆ ನೂತನ ಪ್ರಜಾಸೌಧ ನಿರ್ಮಿಸಲು ಈಗಾಗಲೇ ₹ 8 ಕೋಟಿ ಅನುದಾನ ಸರ್ಕಾರ ನೀಡಿದ್ದರು ಸಹ ಇನ್ನು ಹೆಚ್ಚುವರಿ ಅನುದಾನ ನೀಡಲು ಸರ್ಕಾರಕ್ಕೆ ಮನವಿ ನೀಡಲಾಗಿದೆ. ಅನುದಾನ ದೊರೆತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.</p>.<p>ಅಲ್ಲದೇ ಪುರಸಭೆ ನೂತನ ಕಟ್ಟಡಕ್ಕೆ ₹ 7.50 ಕೋಟಿ ಅನುದಾನ ಬಿಡುಗಡೆ ಹಂತದಲ್ಲಿದೆ. ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಮಾಡಲಾಗುತ್ತಿರುವುದರಿಂದ ₹ 5.60 ಲಕ್ಷರಲ್ಲಿ ನವೀಕರಣ ಕಾಮಗಾರಿ ಪ್ರಾಂಭಿಸಲಾಗುವುದು ಎಂದರು.</p>.<p>ಪುರಸಭೆ ಆದಾಯದ ಜೊತೆಗೆ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಮಾಡೋಣ ಎಂದರು.</p>.<p>ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಅಲ್ಫಸಂಖ್ಯಾತರ ಇಲಾಖೆಯ ಅಬ್ದುಲ್ ಕಲಾಂ ಶಾಲೆಗೆ ಪುರಸಭೆಯ ಸಿಎ ಜಾಗ ನೀಡುವ ಕುರಿತು, ಸಕ್ಕಿಂಗ್ ಮಷೀನ್ ದರ ನಿಗದಿ ಪಡಿಸುವದು, ಪಂಪ ಭವನ ದರ ನಿಗದಿ ಮಾಡುವ ಕುರಿತು ಹಾಗೂ ವಿವಿಧ ಬಿನ್ ಶೇತ್ಕಿ ಜಾಗಗಳಿಗೆ ನಮೂನೆ 3 ನೀಡುವ ಕುರಿತು ಚರ್ಚಿಸಲಾಯಿತು.</p>.<p>ಸಭೆಯಲ್ಲಿ ಸದಸ್ಯರು ನೀಡಿದ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕೆಲಸಗಳ ಕುರಿತು ಸಾಮಾನ್ಯ ಸಭೆಯ ವಿಷಯ ಸೂಚಿಯಲ್ಲಿ ತೆಗೆದುಕೊಂಡು ಚರ್ಚಿಸುವುದಿಲ್ಲ ಯಾಕೆ, ಮತ್ಯಾಕೆ ಸದಸ್ಯರಿಂದ ಯಾಕೆ ಮಾಹಿತಿ ಪಡೆಯುತ್ತಿರಿ ಎಂದು ಕೆಲ ಸದಸ್ಯರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಈ ಸಭೆಯಲ್ಲಿ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಸದಸ್ಯರಾದ ಗಂಗಾ ಕರೆಟ್ಟನವರ, ಇಮಾಮಸಾಬ್ ದರವಾನ, ಸಿ.ಜಿ.ನಾವಳ್ಳಿ, ಎ.ಪಿ.ಗುರಿಕಾರ, ಬಸವಣ್ಣೆವ್ವ ದಿಡ್ಡಿ, ಜಯಲಕ್ಷ್ಮಿ ಜಕರಡ್ಡಿ ಹಾಗೂ ಪುರಸಭೆ ಅಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಣ್ಣಿಗೇರಿ:</strong> ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪುರಸಭೆ ಸದಸ್ಯರು ಎಲ್ಲರೂ ಒಗ್ಗೂಡಿಕೊಂಡು ಶ್ರಮ ವಹಿಸಿ ಕೆಲಸ ಮಾಡಬೇಕು. ಅಲ್ಲದೇ ಪಟ್ಟಣದ ಅಂದವನ್ನು ಹೆಚ್ಚಿಸಲು ತಮ್ಮಲ್ಲಿರುವ ಹೊಸ, ಹೊಸ ಆಲೋಚನೆಗಳನ್ನು ತಿಳಿಸಿದರೆ ಅದಕ್ಕೆ ಪ್ರಾಮುಖ್ಯ ನೀಡಲಾಗುವುದು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.</p>.<p>ಅವರು ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಭಾಗವಹಿಸಿ ಮಾತನಾಡಿ, ತಾಲ್ಲೂಕು ಕೇಂದ್ರವಾಗಿರುವ ಪಟ್ಟಣಕ್ಕೆ ನೂತನ ಪ್ರಜಾಸೌಧ ನಿರ್ಮಿಸಲು ಈಗಾಗಲೇ ₹ 8 ಕೋಟಿ ಅನುದಾನ ಸರ್ಕಾರ ನೀಡಿದ್ದರು ಸಹ ಇನ್ನು ಹೆಚ್ಚುವರಿ ಅನುದಾನ ನೀಡಲು ಸರ್ಕಾರಕ್ಕೆ ಮನವಿ ನೀಡಲಾಗಿದೆ. ಅನುದಾನ ದೊರೆತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.</p>.<p>ಅಲ್ಲದೇ ಪುರಸಭೆ ನೂತನ ಕಟ್ಟಡಕ್ಕೆ ₹ 7.50 ಕೋಟಿ ಅನುದಾನ ಬಿಡುಗಡೆ ಹಂತದಲ್ಲಿದೆ. ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಮಾಡಲಾಗುತ್ತಿರುವುದರಿಂದ ₹ 5.60 ಲಕ್ಷರಲ್ಲಿ ನವೀಕರಣ ಕಾಮಗಾರಿ ಪ್ರಾಂಭಿಸಲಾಗುವುದು ಎಂದರು.</p>.<p>ಪುರಸಭೆ ಆದಾಯದ ಜೊತೆಗೆ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಮಾಡೋಣ ಎಂದರು.</p>.<p>ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಅಲ್ಫಸಂಖ್ಯಾತರ ಇಲಾಖೆಯ ಅಬ್ದುಲ್ ಕಲಾಂ ಶಾಲೆಗೆ ಪುರಸಭೆಯ ಸಿಎ ಜಾಗ ನೀಡುವ ಕುರಿತು, ಸಕ್ಕಿಂಗ್ ಮಷೀನ್ ದರ ನಿಗದಿ ಪಡಿಸುವದು, ಪಂಪ ಭವನ ದರ ನಿಗದಿ ಮಾಡುವ ಕುರಿತು ಹಾಗೂ ವಿವಿಧ ಬಿನ್ ಶೇತ್ಕಿ ಜಾಗಗಳಿಗೆ ನಮೂನೆ 3 ನೀಡುವ ಕುರಿತು ಚರ್ಚಿಸಲಾಯಿತು.</p>.<p>ಸಭೆಯಲ್ಲಿ ಸದಸ್ಯರು ನೀಡಿದ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕೆಲಸಗಳ ಕುರಿತು ಸಾಮಾನ್ಯ ಸಭೆಯ ವಿಷಯ ಸೂಚಿಯಲ್ಲಿ ತೆಗೆದುಕೊಂಡು ಚರ್ಚಿಸುವುದಿಲ್ಲ ಯಾಕೆ, ಮತ್ಯಾಕೆ ಸದಸ್ಯರಿಂದ ಯಾಕೆ ಮಾಹಿತಿ ಪಡೆಯುತ್ತಿರಿ ಎಂದು ಕೆಲ ಸದಸ್ಯರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಈ ಸಭೆಯಲ್ಲಿ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಸದಸ್ಯರಾದ ಗಂಗಾ ಕರೆಟ್ಟನವರ, ಇಮಾಮಸಾಬ್ ದರವಾನ, ಸಿ.ಜಿ.ನಾವಳ್ಳಿ, ಎ.ಪಿ.ಗುರಿಕಾರ, ಬಸವಣ್ಣೆವ್ವ ದಿಡ್ಡಿ, ಜಯಲಕ್ಷ್ಮಿ ಜಕರಡ್ಡಿ ಹಾಗೂ ಪುರಸಭೆ ಅಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>