ತಾಲ್ಲೂಕಿನ ವಿವಿಧ ಗ್ರಾಮಗಳ ಕೂಲಿಕಾರ್ಮಿಕರೂಂದಿಗೆ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಬಂದ ಅವರು ‘ನಿರುದ್ಯೋಗ ಭತ್ಯೆ ನೀಡಲು ಆದೇಶವಿದ್ದರೂ ಕಳಸ, ಸಂಶಿ, ನೆರ್ತಿ, ಕಮಡೊಳ್ಳಿ ಗುಡಗೇರಿ, ತರ್ಲಘಟ್ಟ, ಹಿರೇಗುಂಜಳ, ಪಶುಪತಿಹಾಳ, ರೊಟ್ಟಿಗವಾಡ, ಹಿರೇಬೂದಿಹಾಳ ಹಾಗೂ ದ್ಯಾವನೂರು ಪಂಚಾಯ್ತಿ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ತಾಲ್ಲೂಕು ಅಧಿಕಾರಿಗಳು ಗಮನಹರಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಏ. 25ರಿಂದ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು’ ಎಂದರು.