ಹುಬ್ಬಳ್ಳಿ: ನಗರದ ವಾರ್ಡ್ 66ರ ಬಿಡ್ನಾಳ ಎರಡನೇ ಹಂತದ ಆಶ್ರಯ ಬಡಾವಣೆಯಲ್ಲಿ ₹30 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ‘ಈ ಭಾಗದ ಸಮಗ್ರ ಅಭಿವೃದ್ಧಿಗೆ ಬದ್ದವಿದ್ದು, ಹಂತಹಂತವಾಗಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಎರಡುಮುಖ್ಯರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ನಿರ್ಮಿಸಲಾಗುತ್ತಿದೆ. ಇನ್ನುಳಿದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಬಿಡ್ನಾಳ ಭಾಗವನ್ನು ಮಾದರಿ ಪ್ರದೇಶವನ್ನಾಗಿ ರೂಪಿಸಲಾಗುವುದು’ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಮುತುವಲ್ಲಿ ಅಬ್ದುಲ್ ಗಫರ್ ಮನಿಯಾರ್, ಜಮಖಾನೆವಾಲೆ, ಅಜರ್ ಮನಿಯಾರ್, ಜತ್ತಿ, ಹೊಸಮನಿ, ಅನ್ನು ಸವಣೂರು, ಬಾಷಾ, ಪಂಪಣ್ಣ ಅಂಬಿಗೇರ ಇದ್ದರು.