ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಕಾಮಗಾರಿಗೆ ಭೂಮಿಪೂಜೆ

Last Updated 4 ಏಪ್ರಿಲ್ 2022, 3:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ವಿವಿಧೆಡೆ ₹1.19 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಭೂಮಿಪೂಜೆ ನೆರವೇರಿಸಿದರು.

ಅಂಚಟಗೇರಿ ಓಣಿಯಲ್ಲಿ ₹10 ಲಕ್ಷದಲ್ಲಿ ಒಳಚರಂಡಿ ಕೊಳವೆ ಅಳವಡಿಕೆ, ಬಾಪೂಜಿ ನಗರದಲ್ಲಿ ₹15 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಸದಾಶಿವನಗರ ಹಾಗೂ ಬೀರಬಂದ್ ಓಣಿಯಲ್ಲಿ ₹29.41 ಲಕ್ಷದಲ್ಲಿ ತೆರೆದ ಚರಂಡಿ, ಸಿಸಿ ಪೇವಿಂಗ್, ಒಳಚರಂಡಿ ಕೊಳವೆ ಅಳವಡಿಕೆ, ಸದಾಶಿವನಗರ ಮತ್ತು ನೂರಾನಿ ಪ್ಲಾಟಿನಲ್ಲಿ ₹41 ಲಕ್ಷ ವೆಚ್ಚದಲ್ಲಿ ಸಿಸಿ ಪೇವಿಂಗ್, ಒಳಚರಂಡಿ ಕೊಳವೆ ಅಳವಡಿಕೆ ಹಾಗೂ ಖಾದ್ರಿಯಾ ಟೌನ್‍ನಲ್ಲಿ ₹23.34 ಲಕ್ಷದಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಹಾಗೂ ಸಿಸಿ ಪೇವಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಪಾಲಿಕೆ ಸದಸ್ಯರಾದ ಸುನೀತಾ ಬುರಬುರೆ, ಶೀಲಾ ಕಾಟ್ಕರ್, ಬೀಬಿ ಮರಿಯಮ್ಮ ಮುಲ್ಲಾ, ಮನ್ಸೂರಾ ಮುದಗಲ್, ನಜೀರ್ ಹೊನ್ಯಾಳ, ಹುಸೇನಬೀ ನಾಲತ್ತವಾಡ, ಮೌಲಾನ ಮನ್ಸೂರ್ ಆಲಂ, ಮೌಲಾನ ಮನ್ನನ್, ಮುಖಂಡರಾದ ಪ್ರಕಾಶ ಬುರಬುರೆ, ಸೈಯದ್ ಸಲೀಂ ಮುಲ್ಲಾ, ಮನೋಹರ ವಾಲಿ, ಮುಸ್ತಾಕ್ ಮುದಗಲ್, ಇರ್ಫಾನ್ ನಾಲತ್ತವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT