ದೇಶಪಾಂಡೆ ನಗರ, ಅಂಚಟಗೇರಿ ಓಣಿ ಮತ್ತು ಗದಗನಲ್ಲಿ ಬೈಕ್ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ವಶಪಡಿಸಿಕೊಂಡು, ವಡ್ಡರ ಓಣಿಯ ಹನುಮಂತ ಮಣ್ಣವಡ್ಡರ, ರಾಯನಾಳ ಗ್ರಾಮದ ಚಂದ್ರಶೇಖರ ಗುದ್ದಿ, ಆನಂದ ನಗರ ಕೃಷ್ಣ ಕಾಲೊನಿಯ ವಿನಾಯಕ ಮೈಸೂರ, ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಗ್ರಾಮದ ವೀರೇಶ ಅಂಗಡಿ ಎಂಬುವರನ್ನು ಬಂಧಿಸಿದ್ದಾರೆ. 11 ಬೈಕ್ಗಳ ಮೌಲ್ಯ ₹7.87 ಲಕ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ.