ನೂಲ್ವಿ, ಶೆರೇವಾಡ, ಅದರಗುಂಚಿ, ಕುಸುಗಲ್ ಗ್ರಾಮಗಳಲ್ಲೂ ರೈತರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಉಳಿದುರವ ಬೆಳೆಯನ್ನು ರಸ್ತೆ ಬದಿ ಒಣಗಿಸಿ, ಯಂತ್ರಗಳಿಗೆ ಹಾಕಲಾಗುತ್ತಿದೆ. ‘ಒಂದು ಎಕರೆ ಉದ್ದು ಸಂಸ್ಕರಣೆ ಮಾಡಿಸಲು ₹2 ಸಾವಿರ ನೀಡಬೇಕು. ಕಡಿಮೆ ಬಂದಿರುವ ಫಸಲನ್ನು ನಾವೇ ಒಣಗಿಸಿ ಕಾಳು ಬೇರ್ಪಡಿಸುತ್ತಿದ್ದೇವೆ’ ಎಂದು ನೂಲ್ವಿ ರೈತ ಗಣಪತರಾವ್ ಘೋರ್ಪಡೆ ಹೇಳಿದರು.